ಆ.19: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ

Update: 2020-08-17 16:30 GMT

ಮಂಗಳೂರು, ಆ.17: ನಗರದ 11 ಕೆ.ವಿ. ಕೂಳೂರು, ಚಿಲಿಂಬಿ, ಕುಂಜತ್ತಬೈಲ್, ಮರಕಡ, ದೇರೆಬೈಲ್, ಮಾಲೆಮಾರ್ ಮತ್ತು ಮುಲ್ಲಕಾಡು ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ (ಜಂಗಲ್ ಕಟ್ಟಿಂಗ್, ಜಿಒಎಸ್ ನಿರ್ವಹಣೆ, ಇತರ ಕಾಮಗಾರಿ) ಹಮ್ಮಿಕೊಂಡಿದ್ದು, ಆ.19ರಂದು ಬೆಳಗ್ಗೆ 9:30ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.

ಇದರಿಂದ ದೇರೆಬೈಲ್, ಕುಂಟಿಕಾನ, ಎ.ಜೆ. ಹಾಸ್ಪಿಟಲ್, ಪ್ರಶಾಂತನಗರ, ಮುಲ್ಲಕಾಡು, ಶಿವನಗರ, ಮಾಲೆಮಾರ್, ಲೋಹಿತ್‌ನಗರ, ಆಕಾಶಭವನ, ಕಾವೂರು ಜಂಕ್ಷನ್, ಮರಕಡ, ಕೆಂಜಾರ್, ಕರಂಬಾರ್, ಅಂತೋನಿಕಟ್ಟೆ, ಪೊರ್ಕೋಡಿ, ಕಾವೂರು ಪಂಪ್‌ಹೌಸ್, ತೋಡ್ಲಗುಡ್ಡೆ, ಜ್ಯೋತಿನಗರ, ಬಸವನಗರ, ಕೊರಂಟಾಡಿ, ಕುಂಜತ್ತಬೈಲ್, ಗಾಂಧಿನಗರ, ಶಾಂತಿನಗರ, ವಿದ್ಯಾನಗರ, ಕೂಳೂರು ಜಂಕ್ಷನ್, ರಾಯಿಕಟ್ಟೆ, ಬಂಗ್ರಕೂಳೂರು, ಕೊಟ್ಟಾರಚೌಕಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News