ಪ್ರೊ. ಅಬ್ದುಲ್ ರಹ್ಮಾನ್ ನಿಧನಕ್ಕೆ ಕೆಸಿಎಫ್ ಯುಎಇ ಸಂತಾಪ

Update: 2020-08-18 07:10 GMT

ಯುಎಇ: ಖ್ಯಾತ ಚಿಂತಕ ಹಾಗೂ ಸುನ್ನೀ ಸಂಘ ಸಂಸ್ಥೆಗಳ ನಾಯಕರಾಗಿ ಗುರುತಿಸಿಕೊಂಡಿದ್ದ ಪ್ರೊ. ಎಸ್ ಅಬ್ದುರ್ರಹ್ಮಾನ್ ಇಂಜಿನಿಯರ್ ರವರ ಅಕಾಲಿಕ ಮರಣಕ್ಕೆ ಕರ್ನಾಟಕ ಕಲ್ಚರಲ್ ಪೌಂಡೇಶನ್ ಯುಎಇ ತೀವ್ರ ಸಂತಾಸ ವ್ಯಕ್ತಪಡಿಸಿದೆ.

ಎಸ್ಸೆಸ್ಸೆಫ್ ಮತ್ತು ಎಸ್ ವೈ ಎಸ್ ಸಂಘಟನೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದರು. ಬಹುಭಾಷಾ ಪಾಂಡಿತ್ಯವನ್ನು ಹೊಂದಿದ್ದ ಮೃತರು ಬರಹ ಹಾಗೂ ಭಾಷಣಗಳ ಸಾಮುದಾಯಿಕ ಬದಲಾವಣೆಯನ್ನು ಬಯಸಿ ಯುವಸಮೂಹವನ್ನು ಸಮನ್ವಯ ಶಿಕ್ಷಣದ ಕಡೆಗೆ ಒಲವು ತೋರುವಂತೆ ಪ್ರೊತ್ಸಾಹಿಸುತ್ತಿದ್ದರು. ಇಸ್ಲಾಂ ಮತ್ತು ಸೈನ್ಸ್ ಆಂಗ್ಲ ಪತ್ರಿಕೆಯನ್ನು ಮುನ್ನಡೆಸುತ್ತಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರೊ. ಎಸ್ ಅಬ್ದುರ್ರಹ್ಮಾನ್ ರವರ ಅಕಾಲಿಕ ಮರಣ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಕೆಸಿಎಫ್ ಯುಎಇ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ದುಬೈ ಪ್ರಕಟಣೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News