ಪತ್ರಕರ್ತನ ಗುಂಡಿಕ್ಕಿ ಹತ್ಯೆ: ಪೊಲೀಸರ ಪ್ರತಿಪಾದನೆ ನಿರಾಕರಿಸಿದ ಕುಟುಂಬ

Update: 2020-08-25 17:11 GMT

ಬಲ್ಲಿಯಾ (ಉತ್ತರಪ್ರದೇಶ), ಆ. 25: ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಸೋಮವಾರ ಪತ್ರಕರ್ತರೊಬ್ಬರನ್ನು ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

ಹತ್ಯೆಯಾದ ಪತ್ರಕರ್ತನನ್ನು ರತನ್ ಸಿಂಗ್ (42) ಎಂದು ಗುರುತಿಸಲಾಗಿದೆ. ಇವರು ಖಾಸಗಿ ಸುದ್ದಿ ವಾಹನಿಗೆ ಸುದ್ದಿ ನೀಡುತ್ತಿದ್ದರು. ಈ ಹತ್ಯೆ ಆಸ್ತಿ ವಿವಾದಕ್ಕೆ ಸಂಬಂಧಿಸಿ ನಡೆದಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಆದರೆ, ರತನ್ ಸಿಂಗ್ ಅವರ ತಂದೆ ವಿನೋದ್ ಸಿಂಗ್ ಪೊಲೀಸರ ಈ ಪ್ರತಿಪಾದನೆಯನ್ನು ತಳ್ಳಿ ಹಾಕಿದ್ದಾರೆ. ನಮಗೆ ಯಾವುದೇ ಆಸ್ತಿ ವಿವಾದ ಇಲ್ಲ. ಪೊಲೀಸರು ಕಥೆ ಹೆಣೆಯುತ್ತಿದ್ದಾರೆ ವಿನೋದ್ ಸಿಂಗ್ ಹೇಳಿದ್ದಾರೆ.

ರತನ್ ಸಿಂಗ್ ಭೂಮಿಗೆ ಸಂಬಂಧಿಸಿದ ಮಾತುಕತೆಗೆ ಸೋಮವಾರ ತನ್ನ ಗ್ರಾಮಕ್ಕೆ ತೆರಳಿದ್ದರು. ಅಲ್ಲಿ ಅವರನ್ನು ಮೂವರು ದುಷ್ಕರ್ಮಿಗಳು ಅಟ್ಟಿಸಿಕೊಂಡು ಬಂದರು. ರತನ್ ಸಿಂಗ್ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದರು. ರತನ್ ಸಿಂಗ್ ಅವರನ್ನು ಹತ್ಯೆಗೈದ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News