ಹ್ಯುಮಾನಿಟಿ ಫೌಂಡೇಶನ್ ಅಸ್ತಿತ್ವಕ್ಕೆ

Update: 2020-08-27 07:28 GMT

ಉಳ್ಳಾಲ, ಆ.27: ಸಂಘಟನೆಯ ಮೂಲಕ ಸಮಾಜ ಸೇವೆ ಮಾಡುವ ಉದ್ದೇಶದಿಂದ ಸಮಾನ ಮನಸ್ಕರ ಹ್ಯುಮಾನಿಟಿ ಫೌಂಡೇಶನ್ ಮಂಗಳೂರು ಎಂಬ ನೂತನ ಸಂಘಟನೆಯನ್ನು ಇತ್ತೀಚೆಗೆ ರಚಿಸಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.

ಅಧ್ಯಕ್ಷರಾಗಿ ನಾಸಿರ್ ಸಾಮನಿಗೆ, ಉಪಾಧ್ಯಕ್ಷರಾಗಿ ಆರ್.ಕೆ.ಜಾಫರ್ ಉಳ್ಳಾಲ, ಯೂಸುಫ್ ಉಚ್ಚಿಲ, ಪ್ರ. ಕಾರ್ಯದರ್ಶಿಯಾಗಿ ಹಮೀದ್ ಪಜೀರ್, ಕಾರ್ಯದರ್ಶಿಯಾಗಿ ಸೈಫುಲ್ಲಾ ಸೋಮೇಶ್ವರ, ಜೊತೆ ಕಾರ್ಯದರ್ಶಿಗಳಾಗಿ ರಿಯಾಝ್  ದೇರಳಕಟ್ಟೆ, ಅಝೀಝ್ ಮದ್ಪಾಡಿ, ಕೋಶಾಧಿಕಾರಿಯಾಗಿ ಇಲ್ಯಾಸ್ ಚಾರ್ಮಾಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಝಮೀರ್ ಅಹ್ಮದ್ ತೊಕ್ಕೊಟ್ಟು, ಯಾಸೀನ್ ಹರೇಕಳ, ಸಂಶೀರ್ ಎ. ಕುತ್ತಾರ್, ಸಿ.ಎಚ್.ರಹ್ಮಾನ್ ಚಂದಹಿತ್ಲು, ಶಿಹಾಬ್ ದೇರಳಕಟ್ಟೆ, ಪತ್ರಿಕಾ ಕಾರ್ಯದರ್ಶಿಗಳಾಗಿ ಬಶೀರ್ ಕಲ್ಕಟ್ಟ, ಆರಿಪ್ ಕಲ್ಕಟ್ಟ, ಸಂಚಾಲಕರಾಗಿ ಕಲಂದರ್ ಪರ್ತಿಪ್ಪಾಡಿ, ಎಚ್.ಆಸಿಫ್ ಅಬ್ದುಲ್ಲ, ಎಂ.ಇಕ್ಬಾಲ್ ದೇರಳಕಟ್ಟೆ, ಮುನೀರ್ ಶಾಂತಿ ಬಾಗ್, ಅಮೀರ್ ಶಾಫಿ  ದೇರಳಕಟ್ಟೆ, ಕಾನೂನು ಸಲಹೆಗಾರರಾಗಿ ಫೈಝಲ್ ಅಡ್ವೋಕೇಟ್, ಸಾಮಾಜಿಕ ಜಾಲತಾಣ ಉಸ್ತುವಾರಿಯಾಗಿ ಖಲೀಲ್ ಪನೀರ್ ಹಾಗೂ ಇತರ ಐವರನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News