ಉದ್ಯಾವರ ಮನೆ ಕಳವು ಪ್ರಕರಣ: ಆರೋಪಿಯ ಬಂಧನ

Update: 2020-08-29 15:52 GMT

ಕಾಪು, ಆ.29: ಉದ್ಯಾವರ ಗ್ರಾಮದ ಕಂಪನಬೆಟ್ಟು ಎಂಬಲ್ಲಿ ಆ.27ರಂದು ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ, ಕಾಪು ಪೊಲೀಸರು ಕ್ಷಿಪ್ರ ಕಾರ್ಯಾ ಚರಣೆಯ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉದ್ಯಾವರ ಸಂಪಿಗೆನಗರದ ದಿನೇಶ್ ರಾವ್ ಬಂಧಿತ ಆರೋಪಿ. ಉದ್ಯಾವರ ಜೈಹಿಂದ್ ಕಾಂಪ್ಲೆಕ್ಸ್ ಬಳಿ ಅನುಮಾನಾಸ್ಪದವಾಗಿ ತಿರುಗಾಡು ತ್ತಿದ್ದ ವ್ಯಕ್ತಿಯನ್ನು ಕಾಪು ಠಾಣೆಯ ಎಸ್ಸೈ ಐ.ಆರ್.ಗಡ್ಡೆಕರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಈತ ಕಂಪನಬೆಟ್ಟುವಿನ ಗ್ಲೋರಿನ ಮೆಂಡೋನ್ಸ ಎಂಬವರ ಮನೆಗೆ ನುಗ್ಗಿ ಸುಮಾರು 24000 ರೂ. ಮೌಲ್ಯದ ಟಿವಿ, ಅಲ್ಯೂಮಿನಿಯಂ ಪಾತ್ರೆಗಳು, ಗ್ಯಾಸ್ ಸಿಲಿಂಡರ್ ಹಾಗು ಇತರ ವಸ್ತುಗಳನ್ನು ಕಳವು ಮಾಡಿ ದ್ದನು. ಈ ಎಲ್ಲ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News