ತಿರುವನಂತಪುರಂ: ಇಬ್ಬರು ಡಿವೈಎಫ್‍ಐ ಕಾರ್ಯಕರ್ತರ ಹತ್ಯೆ

Update: 2020-08-31 10:49 GMT

ತಿರುವನಂತಪುರಂ: ಸಿಪಿಎಂ ಯುವ ಘಟಕ ಡಿವೈಎಫ್‍ಐನ ಇಬ್ಬರು ಸದಸ್ಯರನ್ನು ತಿರುವನಂತಪುರಂನಲ್ಲಿ ರವಿವಾರ ರಾತ್ರಿ ಕೊಲೆಗೈಯ್ಯಲಾಗಿದೆ. ಈ ಅವಳಿ ಕೊಲೆ ಹಿಂದೆ ಕಾಂಗ್ರೆಸ್ ಕೈವಾಡವಿದೆಯೆಂಬ ಸಿಪಿಎಂ ಆರೋಪವನ್ನು ಕಾಂಗ್ರೆಸ್ ತಳ್ಳಿ ಹಾಕಿದೆ.

 ಕೊಲೆಗೀಡಾದವರನ್ನು ಮಿಥಿಲ್ ರಾಜ್ (32) ಹಾಗೂ ಹಕ್ ಮುಹಮ್ಮದ್ (24) ಎಂದು ಗುರುತಿಸಲಾಗಿದೆ. ಇಬ್ಬರೂ ದ್ವಿಚಕ್ರ ವಾಹನವೊಂದರಲ್ಲಿ ಸಾಗುತ್ತಿದ್ದಾಗ ಅವರ ಮೇಲೆ ದಾಳಿ ನಡೆಸಲಾಗಿದೆ. ಒಬ್ಬ ಘಟನಾ ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಎರಡು ಗುಂಪುಗಳ ನಡುವೆ ಪ್ರಚಾರ ಮೆರವಣಿಗೆಯ ಸಂದರ್ಭ ಘರ್ಷಣೆ ನಡೆದಿತ್ತು. ಇದರ ಮುಂದುವರಿದ ಭಾಗವಾಗಿ ಈ ಕೊಲೆಗಳು ನಡೆದಿರಬಹುದು ಎಂದು ತಿರುವನಂತಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಬಿ ಅಶೋಕನ್ ಹೇಳಿದ್ದಾರೆ.

ಪ್ರಕರಣದ ಹಿಂದೆ ಕಾಂಗ್ರೆಸ್ ಶಾಮೀಲಾತಿ ಕುರಿತಾದ ಆರೋಪಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನೆಯ್ಯತಿನ್ಕರ ಸನಲ್, “ಇದು ರಾಜಕೀಯ ಕೊಲೆಯಲ್ಲ,  ಈ ಜನರ ನಡುವೆ ವೈಯಕ್ತಿಕ ದ್ವೇಷವಿತ್ತು, ಕೊಲೆಗೂ, ಪಕ್ಷ ಯಾ ಅದರ ಯಾವುದೇ ಸಂಘಟನೆಗಳಿಗೂ ಸಂಬಂಧವಿಲ್ಲ, ಆರೋಪಗಳು ಆಧಾರರಹಿತ'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News