ಗಾಂಜಾ ಸೇವನೆ: ಮೂವರು ಪೊಲೀಸ್ ವಶಕ್ಕೆ
Update: 2020-09-01 15:30 GMT
ಮಣಿಪಾಲ, ಸೆ.1: ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಆ.28ರಂದು ಗಾಂಜಾ ಸೇವನೆ ಮಾಡಿದ ಮೂವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂಡಬಿದ್ರೆಯ ಆಶ್ರೀತ್ ಶೆಟ್ಟಿ(23), ಬೆಂಗಳೂರಿನ ಅರೋನ್ ಸೇತ್ (22), ಮಂಗಳೂರು ಕಂಕನಾಡಿಯ ದಿಲಿನ ತಾವ್ರೊ(29) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿ ಪರೀಕ್ಷಿಸಲಾಗಿದ್ದು, ವೈದ್ಯರು ಸೆ.1ರಂದು ನೀಡಿದ ವರದಿಯಲ್ಲಿ ಇವರೆಲ್ಲ ಗಾಂಜಾಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.