ಸಾಧ್ವಿಯ ಸಾಮೂಹಿಕ ಅತ್ಯಾಚಾರಗೈದ ದುಷ್ಕರ್ಮಿಗಳು: ಆರೋಪ

Update: 2020-09-08 17:24 GMT

ರಾಂಚಿ, ಸೆ. 8: ರಾಂಚಿಯಿಂದ 325 ಕಿ. ಮೀ. ದೂರದ ಗೊಡ್ಡಾದಲ್ಲಿರುವ ಮಹಿಳಾ ಸಂಸ್ಥಾನ ಆಶ್ರಮದಲ್ಲಿ ಮಂಗಳವಾರ ಮುಂಜಾನೆ 40 ವರ್ಷದ ಸಾಧ್ವಿಯೋರ್ವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಮಂಗಳವಾರ ಮುಂಜಾನೆ 2.30ರ ಹೊತ್ತಿಗೆ ಕನಿಷ್ಠ ಐವರಿದ್ದ ಗುಂಪು ಆಶ್ರಮ ಪ್ರವೇಶಿಸಿತು. ಅಲ್ಲಿದ್ದ ಸಾಧ್ವಿಗೆ ಥಳಿಸಿತು. ಅನಂತರ ಅತ್ಯಾಚಾರ ಎಸಗಿತು ಎಂದು ಆರೋಪಿಸಳಾಗಿದೆ. ಮಂಗಳವಾರ ಮುಂಜಾನೆ ಇಬ್ಬರು ವ್ಯಕ್ತಿಗಳು ಆಶ್ರಮ ಪ್ರವೇಶಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಾಧ್ವಿ ಆರೋಪಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇಬ್ಬರು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ಬಳಿಕ ಈ ಪ್ರಕರಣದ ತನಿಖೆ ಆರಂಭಿಸಲಾಗುವುದು ಎಂದು ಗೊಡ್ಡಾ ಪೊಲೀಸ್ ಅಧೀಕ್ಷಕ ವೈ.ಎಸ್. ರಮೇಶ್ ತಿಳಿಸಿದ್ದಾರೆ. ಘಟನೆಯ ಹಿಂದಿನ ಖಚಿತ ಕಾರಣ ಇದುವರೆಗೆ ತಿಳಿದುಬಂದಿಲ್ಲ. ತನಿಖೆಯ ಸಂದರ್ಭ ಎಲ್ಲ ಆಯಾಮಗಳನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News