×
Ad

‘ಮಾಧ್ಯಮ, ಸ್ವಾತಂತ್ರ್ಯ, ಸತ್ಯದ ಸಾವಿಗೆ ಶ್ರದ್ಧಾಂಜಲಿ’: ಗಮನಸೆಳೆದ ಪತ್ರಿಕಾ ಜಾಹೀರಾತು

Update: 2020-09-12 16:44 IST

ಹೊಸದಿಲ್ಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ವಿಚಾರಣೆ ಕುರಿತಂತೆ ವರದಿ ಮಾಡುವ ಸಂದರ್ಭ ಟಿವಿ ವಾಹಿನಿಗಳು ಅನುಸರಿಸುತ್ತಿರುವ ಅತ್ಯಂತ ಅಸಂವೇದಿತನದ ವರ್ತನೆ ಮಾಧ್ಯಮವನ್ನು ಹೇಗೆ ಕೆಟ್ಟದಾಗಿ ಬಿಂಬಿಸಿದೆ ಎಂಬುದನ್ನು ಸೂಚಿಸುವ ಸಲುವಾಗಿ ಮಾಧ್ಯಮದ ಸಾವನ್ನು ಸೂಚ್ಯವಾಗಿ ಘೋಷಿಸುವ `ಶ್ರದ್ಧಾಂಜಲಿ' ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

‘ದಿ ಹಿಂದು’ ಪತ್ರಿಕೆಯ ಹೊಸದಿಲ್ಲಿ ಆವೃತ್ತಿಯಲ್ಲಿ ಪ್ರಕಟಗೊಂಡ ಈ ಶ್ರದ್ಧಾಂಜಲಿಯಲ್ಲಿ ಮಾಧ್ಯಮ, ಸ್ವಾತಂತ್ರ್ಯ ಮತ್ತು ಸತ್ಯ ಪದಗಳನ್ನು (Media, Freedom and Truth) ಯಾರಿಗೂ ತಿಳಿಯದ ಹಾಗೆ ಬಳಸಲಾಗಿದೆ.

"With profound regret, we announce the demise of Ms ME Dia, beloved daughter of Mr EE Dom (FR) and wife of Mr T Ruth in New Delhi on September 8,2020. Mourned by friends and family"

“ಅತ್ಯಂತ ವಿಷಾದದಿಂದ ನಾವು EE Dom (FR) ಇವರ ಪ್ರೀತಿಯ ಪುತ್ರಿಯ ಹಾಗೂ Mr T Ruth ಇವರ ಪತ್ನಿಯಾದ  Ms ME Dia ಇವರು ಸೆಪ್ಟೆಂಬರ್ 8, 2020ರಂದು ನಿಧನರಾಗಿದ್ದಾರೆಂದು ಘೋಷಿಸುತ್ತಿದ್ದೇವೆ. ಶೋಕತಪ್ತ ಸ್ನೇಹಿತರು ಮತ್ತು ಕುಟುಂಬ'' ಎಂದು ಶ್ರದ್ಧಾಂಜಲಿಯಲ್ಲಿ ಬರೆಯಲಾಗಿದೆ.

ಈ ಜಾಹೀರಾತನ್ನು ಪ್ರಕಟಿಸಿದ ದಿಲ್ಲಿ ನಿವಾಸಿಯಾಗಿರುವ 24 ವರ್ಷದ ಕಾರ್ತಿಕ್ ಸಾಹ್ನಿ ಎಂಬವರು ಈ ಕುರಿತು ಟ್ವೀಟ್ ಮಾಡಿ “ಇದನ್ನು ದಿ ಹಿಂದು ಪ್ರಕಟಿಸಿರುವದಕ್ಕೆ ಅಚ್ಚರಿ, ಗೊಂದಲವಾಗಿದೆ ಹಾಗೂ ಧನ್ಯವಾದವನ್ನೂ ತಿಳಿಸುತ್ತೇನೆ'' ಎಂದಿದ್ದಾರೆ.

ಈ ಕುರಿತಂತೆ ಸಾಮಾಜಿಕ ತಾಣದಲ್ಲಿ ಪ್ರತಿಕ್ರಿಯಿಸಿದವರೊಬ್ಬರು ಈ ಜಾಹೀರಾತಿಗೂ ಟೈಮ್ಸ್ ಆಫ್ ಇಂಡಿಯಾದಲ್ಲಿ ಜೂನ್ 1975ರಲ್ಲಿ ಪ್ರಕಟಗೊಂಡ ಒಂದು ಶ್ರದ್ಧಾಂಜಲಿ ಜಾಹೀರಾತಿಗೂ ಸಾಮ್ಯತೆಯಿದೆ ಎಂದಿದ್ದಾರೆ. ಆಗಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತುಪರಿಸ್ಥಿತಿ ಘೊಷಿಸಿದ ನಂತರ ಪ್ರಕಟಗೊಂಡ  ಜಾಹೀರಾತಿನಲ್ಲಿ ಪ್ರಜಾಪ್ರಭುತ್ವದ ಸಾವನ್ನು ಸೂಚ್ಯವಾಗಿ D'OCracy - D.E.M., beloved husband of T. Ruth, loving father of L.I. Bertie, brother of Faith, Hope, Justicia, expired on June 26 ಎಂದು ವಿವರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News