ಮುಡಿಪು: ಆಟೋ ಚಾಲಕರಿಂದ ರಕ್ತದಾನ ಶಿಬಿರ

Update: 2020-09-13 12:04 GMT

ಕೊಣಾಜೆ: ಆಟೋ ರಾಜ ಕನ್ಮಾರ್ ಹೆಲ್ಪ್ ಲೈನ್ ಗ್ರೂಪ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಸಹಭಾಗಿತ್ವದಲ್ಲಿ ಫಾದರ್ ಮುಲ್ಲರ್ ಬ್ಲಡ್ ಬ್ಯಾಂಕ್ ಮಂಗಳೂರು ಸಹಕಾರದೊಂದಿಗೆ ಸೌಹಾರ್ದ ರಕ್ತದಾನ ಶಿಬಿರ ಮುಡಿಪುವಿನ ಸಾಂಬಾರತೋಟ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಸೌಹಾರ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಆಟೋ ಚಾಲಕರು ಕರ್ತವ್ಯ ನಿರ್ವಸುವ  ಜೊತೆಗೆ ಸಂಘಟಿತರಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಉತ್ತಮ‌ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಸಾಂಬಾರತೋಟ ನೂರಾನಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಇಬ್ರಾಹೀಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ನೂರಾನಿಯಾ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ರಝಾಕ್ ಅಹ್ಸನಿ, ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷ ಸಿದ್ದೀಕ್‌ ಮಂಜೇಶ್ವರ, ಇಸ್ಮಾಯಿಲ್ ಮಾಸ್ಟರ್, ಎಸ್ ವೈಎಸ್ ಸಾಂಬಾರತೋಟ ಶಾಖಾಧ್ಯಕ್ಷ ಹಸನ್ ಹಾಜಿ, ಖಿದ್ಮತುಲ್ ಇಸ್ಲಾಂ ಅಸೋಶಿಯೇಶನ್ ಅಧ್ಯಕ್ಷ ಶಾಹುಲ್ ಹಮೀದ್ ಎಚ್.ಬಿ.ಟಿ ಮುಖ್ಯ ಅತಿಥಿಯಾಗಿದರು‌‌.

ಆಟೋ ರಾಜ ಕನ್ಮಾರ್ ಹೆಲ್ಪ್ ಲೈನ್ ಗ್ರೂಫ್ ಮುಖ್ಯಸ್ಥರಾದ ನಾಸಿರ್ ಕಲ್ಮಿಂಜ, ಇಸಾಕ್ ಬೋಳಿಯಾರ್, ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯನಿವಹಾಕರಾದ ಫಯಾಝ್ ಮಾಡೂರು, ಸಿರಾಜ್ ಫಜೀರ್, ಹಮೀದ್ ಪಜೀರ್, ಸದಸ್ಯರಾದ ಮನ್ಸೂರ್ ಕೋಡಿಜಾಲ್, ಇಸ್ಹಾಕ್ ಮುಂತಾದವರು ಉಪಸ್ಥಿತರಿದರು.

ಈ ಸಂದರ್ಭ ಎಂಎನ್ ಜಿ ಫೌಂಡೇಶನ್ ನ ಇಲ್ಯಾಸ್ ಮಂಗಳೂರು, ಮೈಮೂನಾ ಫೌಂಡೇಶನ್ ನ ಆಸಿಫ್ ಹಾಗೂ ಎಸ್.ಎಚ್ ಇಬ್ರಾಹೀಂ ಸಾಂಬಾರತೋಟ ಅವರನ್ನು ಸನ್ಮಾನಿಸಲಾಯಿತು.

ಅಬ್ದುಲ್‌ ಜಲೀಲ್ ಸ್ವಾಗತಿದರು. ಸಿದ್ದೀಕ್ ಕೊಡಕ್ಕಲ್ ವಂದಿಸಿದರು. ಬ್ಲಡ್ ಡೋನರ್ಸ್ ಮಂಗಳೂರು ಇದರ ಆಡ್ಮಿನ್ ಅಬ್ದುಲ್ ರಝಾಕ್ ಸಾಲ್ಮರ ಕಾರ್ಯಕ್ರಮ‌ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News