ಸೆ.19ರಂದು ಬೈಂದೂರು ಸಂಸದರ ಕಚೇರಿ ಮುಂದೆ ಧರಣಿ

Update: 2020-09-17 12:28 GMT

ಬೈಂದೂರು, ಸೆ.17: ಸಿಪಿಐಎಂ ಪಕ್ಷದ ಕರೆಯಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರಿನ ಪ್ರವಾಸಿ ಮಂದಿರ ದಲ್ಲಿರುವ ಸಂಸದ ಬಿ.ವೈ.ರಾಘವೇಂದ್ರ ಅವರ ಕಚೇರಿ ಎದುರು ಸೆ.19ರಂದು ಮಧ್ಯಾಹ್ನ 3ಗಂಟೆಗೆ ಪ್ರತಿಭಟನೆ ಹಾಗೂ ಮನವಿ ಅರ್ಪಣೆ ಕಾರ್ಯಕ್ರಮ ಜರಗಲಿದೆ ಎಂದು ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಲ್ಲಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News