ಕತರ್‌ನಲ್ಲಿ ಇಂಜಿನಿಯರ್ಸ್‌ ದಿನಾಚರಣೆ

Update: 2020-09-17 14:15 GMT

ದೋಹಾ(ಕತರ್), ಸೆ.17: ಕತರ್‌ನ ಕರ್ನಾಟಕ ಸಂಘದ ವತಿಯಿಂದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ 160ನೇ ಜನ್ಮ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಬಾರಿ ಮುಖ್ಯ ಅತಿಥಿಗಳಾಗಿ ಸ್ಥಳೀಯ ಓರೆಡೊ ಸಂಸ್ಥೆಯ ಮುಖ್ಯ ತಂತ್ರಯೋಜನಾಧಿಕಾರಿ ಮುನೀರ ಫಹದ್-ಅಲ್ ದೊಸಾರಿ ಭಾಗವಹಿಸಿದ್ದರು. ಕರ್ನಾಟಕ ಮೂಲದ ಇಂಜಿನಿಯರ್‌ಗಳಾದ ರಮೇಶ್, ಹನುಮೇಶ್ ಸಿದ್ಧೇಗೌಡ ಹಾಗೂ ಕುಮಾರಸ್ವಾಮಿ ಅವರು ಮಾತನಾಡಿದರು.

ಕರ್ನಾಟಕ ಸಂಘ ಕತರ್ ಪ್ರತಿ ವರ್ಷದಂತೆ ಈ ಬಾರಿಯು ಭಾರತ ಮೂಲದ ಇಬ್ಬರನ್ನು ‘ಅಭಿಯಂತರಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತು. ಆಂಧ್ರ ಪ್ರದೇಶ ಮೂಲದ ಹೇಮಚಂದ್ರನ್ ಹಾಗೂ ಕರ್ನಾಟಕ ಮೂಲದ ಮಹೇಶ್ ಗೌಡ ಈ ಬಾರಿ ಪ್ರಶಸ್ತಿ ಬಾಜನರಾದರು.

ಐಐಸಿಸಿಯ ಕಂಜಾನಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ವೀರಭದ್ರಪ್ಪ ಮನ್ನಂಗಿ, ದೀಪಕ್ ಶೆಟ್ಟಿ, ಮಧು ಕೃಷ್ಣಮೂರ್ತಿ, ವೆಂಕಟ ರಾವ್, ಭಾರತೀಯ ಕ್ರೀಡಾ ಕೇಂದ್ರದ ಪ್ರತಿನಿಧಿ ಅರುಣ್ ಕುಮಾರ್ ಹಾಗು ಭಾರತೀಯ ಸಮುದಾಯ ಹಿತೈಷಿ ವೇದಿಕೆಯ ಜಂಟಿ ಕಾರ್ಯದರ್ಶಿ ಸುಬ್ರಮಣ್ಯ ಹೆಬ್ಬಾಗಿಲು ಉಪಸ್ಥಿತರಿದ್ದರು. ಅಕ್ಷಯ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News