ಸೆ.20ರಂದು ನೂತನ ಕ್ಯಾಂಪಸ್ ಉದ್ಘಾಟನೆ

Update: 2020-09-17 14:23 GMT

 ಉಡುಪಿ, ಸೆ.17: ವಾಣಿಜ್ಯ ಶಿಕ್ಷಣ ನೀಡುತ್ತಿರುವ ಉಡುಪಿಯ ತ್ರಿಶಾ ವಿದ್ಯಾ ಕಾಲೇಜು ಇದೀಗ ಕಟಪಾಡಿಯ ಎಸ್‌ವಿಎಸ್ ಕ್ಯಾಂಪಸ್‌ಗೆ ಸ್ಥಳಾಂತರ ಗೊಳ್ಳಲಿದ್ದು, ನೂತನ ಕ್ಯಾಂಪಸ್‌ನ ಉದ್ಘಾಟನೆ ಇದೇ ಸೆ.20ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ತ್ರಿಶಾ ಸಂಸ್ಥೆಗಳ ಪ್ರವರ್ತಕ ಹಾಗೂ ಅಧ್ಯಕ್ಷ ಸಿ.ಎ.ಗೋಪಾಲಕೃಷ್ಣ ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನೂತನ ಕ್ಯಾಂಪಸ್‌ನ್ನು ಸಾಮಾಜಿಕ ಮುಂದಾಳು ಡಾ.ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಲಿದ್ದು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದರು.

ಸರಕಾರದ ಕೋವಿಡ್ ನಿಯಮಗಳಡಿ ಸೀಮಿತ ಆಹ್ವಾನಿತರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರಗಲಿದೆ ಎಂದು ಸಿ.ಎ. ಗೋಪಾಲಕೃಷ್ಣ ಭಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News