ಮಟ್ಕಾ ಜುಗಾರಿ: ಮೂವರ ಬಂಧನ

Update: 2020-09-17 15:46 GMT

ಕಾರ್ಕಳ, ಸೆ.17: ಮಟ್ಕಾ ಜುಗಾರಿಗೆ ಸಂಬಂಧಿಸಿ ಸೆ.16ರಂದು ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಮೂವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಕಳ ಬಜಗೋಳಿ ಬಸ್ ನಿಲ್ದಾಣದ ಬಳಿ ಮಿಯಾರು ಜೋಡುಕಟ್ಟೆಯ ಮಣಿಕಂಠ(33), ಕೋಟ ಮಣೂರು ರಾ.ಹೆ.66ರ ಕರಾವಳಿ ಹೋಟೆಲ್ ಸಮೀಪ ಸಾಲಿಗ್ರಾಮದ ಈಶ್ವರ(47), ಕುಂದಾಪುರ ಕಾಳಾವರ ಗ್ರಾಮದ ಸೆಲ್ವಾಡಿ ಬಸ್ ನಿಲ್ದಾಣದ ಬಳಿ ಬಾಲಕೃಷ್ಣ ಶೆಟ್ಟಿ(47) ಎಂಬವರನ್ನು ಪೊಲೀಸರು ಬಂಧಿಸಿ, ನಗದು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News