​ಗಾಂಜಾ ಸೇವನೆ: ಮತ್ತೆ ಮೂವರು ವಶಕ್ಕೆ

Update: 2020-09-17 15:48 GMT

ಉಡುಪಿ, ಸೆ.17: ಗಾಂಜಾ ಸೇವನೆಗೆ ಸಂಬಂಧಿಸಿ ಮತ್ತೆ ಮೂವರನ್ನು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಶಿರ್ವ ಬ್ಯಾಂಕ್ ಆಫ್ ಬರೋಡಾ ಬಳಿ ಸೆ.15ರಂದು ಸ್ಥಳೀಯ ನಿವಾಸಿ ಮುಹಮ್ಮದ್ ಅಖಿಲ್(33), ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾರತ್ನನಗರ ಎಂಬಲ್ಲಿ ಸೆ.14ರಂದು ಪ್ರಶಾಂತ್ ಸಂಗನಿ(22) ಮತ್ತು ಸೆ.13ರಂದು ಮಣಿಪಾಲದ ಮಣ್ಣಪಲ್ಲ ಲೇಕ್ ಬಳಿ ಸಾತ್ವಿಕ್ ಮೊಹಂತಿ(23) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡು ಪರೀಕ್ಷೆಗೆ ಒಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News