ಅಕ್ರಮ ಸಾಗಾಟ: ಪಡಿತರ ಬೆಳ್ತಿಗೆ ಅಕ್ಕಿ ವಶ

Update: 2020-09-17 15:53 GMT

ಗಂಗೊಳ್ಳಿ, ಸೆ.17: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಕ್ಕಿಯನ್ನು ಆಹಾರ ನಿರೀಕ್ಷಕರ ನೇತೃತ್ವದ ತಂಡ ವಶಕ್ಕೆ ಪಡೆದಿರುವ ಘಟನೆ ಸೆ.17ರಂದು ಬೆಳಗ್ಗೆ ಅಣ್ಣಪ್ಪಯ್ಯ ಸಭಾಭವನ ಎದುರು ರಾ.ಹೆ.66ರಲ್ಲಿ ನಡೆದಿದೆ.

ಮರವಂತೆ ಕಡೆಯಿಂದ ಕುಂದಾಪುರ ಕಡೆಗೆ ಇಕೋ ವಾಹನದಲ್ಲಿ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಕುಂದಾಪುರ ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್. ಕಾರ್ಯಾಚರಣೆ ನಡೆಸಿದ್ದಾರೆ. 15,645ರೂ. ಮೌಲ್ಯದ ಒಟ್ಟು 1,043 ಕಿಲೋ ಪಡಿತರ ಬೆಳ್ತಿಗೆ ಅಕ್ಕಿ ಹಾಗೂ 3,50,000ರೂ. ಮೌಲ್ಯದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ವಾಹನದ ಚಾಲಕ ಮೊಹಮ್ಮದ್ ಸಬೀಲ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News