ಭಟ್ಕಳ: ಗಾಂಜಾ ಮಾರಾಟ; ಮೂವರ ಬಂಧನ
Update: 2020-09-17 16:37 GMT
ಭಟ್ಕಳ: ತಾಲೂಕಿನ ಸಾಗಾರ ರಸ್ತೆಯ ಕಿತ್ರೆ ಎಂಬಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಖಚಿತ ಮಾಹಿತಿ ಮೆರೆಗೆ ಕಾರ್ಯಾಚರಣೆ ನಡೆಸಿದ ಗ್ರಾಮೀಣ ಪೊಲೀಸರು 750 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಹೊನ್ನಾವರ ತಾಲೂಕಿನ ಮಂಕಿಯ ಹೆರಾಳಿ ನಿವಾಸಿ ಗಣಪತಿ ಮಂಜಪ್ಪ ನಾಯ್ಕ, ಮುರುಡೇಶ್ವರ ಹೀರೆದೋಮಿಯ ಜನಾರ್ಧನ ಅಣ್ಣಪ್ಪ ಹರಿಕಂತ್ರ ಹಾಗೂ ಭಟ್ಕಳದ ಕರಿಕಲ್ ನಿವಾಸಿ ಆನಂದ ಮಾದೇವ ಮೊಗೇರ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ 750 ಗ್ರಾಂ ತೂಕದ ಗಾಂಜಾ, 1 ಸ್ಕೂಟಿ, 3 ಮೊಬೈಲ್ ಹಾಗೂ 2,700 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.