ಕರ್ನಾಟಕ ವಿವಿ ಸಿಂಡಿಕೇಟ್ ಸದಸ್ಯರಾಗಿ ಡಾ.ವೆಂಕಟರಾಯ ಶೆಟ್ಟಿಗಾರ್ ನೇಮಕ

Update: 2020-09-19 14:07 GMT

ಉಡುಪಿ, ಸೆ.19: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಅಂಕೋಲದ ಗೋಖಲೆ ಸೆಂಟನರಿ ಕಾಲೇಜಿನ ಪ್ರಾಚಾರ್ಯ ಡಾ.ವೆಂಕಟರಾಯ ಶೆಟ್ಟಿಗಾರ್ ಇವರನ್ನು ನಾಮ ನಿರ್ದೇಶನ ಮಾಡಿ ಕರ್ನಾಟಕ ವಿವಿ ಕುಲಸಚಿವರು ಆದೇಶಿಸಿದ್ದಾರೆ.

ಕರ್ನಾಟಕ ವಿವಿ ಕುಲಸಚಿವ ಡಾ.ಹನುಮಂತಪ್ಪ ಕೆ.ಟಿ. ಅವರು ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದ್ದು, ವಿವಿ ಕುಲಪತಿಗಳ ಆದೇಶದಂತೆ ಒಂದು ವರ್ಷದ ಅವಧಿಗೆ ಅಥವಾ ಪ್ರಾಚಾರ್ಯರ ಹುದ್ದೆಯಲ್ಲಿ ಇರುವವರೆಗೆ ಅಥವಾ ಮುಂದಿನ ಆದೇಶದವರೆಗೆ ನಾಮ ನಿರ್ದೇಶಿತ ಸದಸ್ಯ ರಾಗಿ ಇವರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅದರಲ್ಲಿ ತಿಳಿಸಿದ್ದಾರೆ.

ಡಾ.ವೆಂಕಟರಾಯ ಶೆಟ್ಟಿಗಾರ್ ಅವರನ್ನು ಸಿಂಡಿಕೇಟ್ ಸಭೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಿರುವುದನ್ನು ಕೆನರಾ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ಎಸ್.ಪಿ.ಕಾಮತ್ ಹಾಗೂ ಟ್ರಸ್ಟಿಗಳು ಮತ್ತು ಕಾಲೇಜಿನ ಉಪನ್ಯಾಸಕರು ಅಭಿನಂದಿಸಿದ್ದಾರೆ.

ಡಾ.ವೆಂಕಟರಾಯ ಶೆಟ್ಟಿಗಾರ್ ಇವರು ಉಡುಪಿ ಜಿಲ್ಲೆ ಬ್ರಹ್ಮಾವರದ ರಾಷ್ಟ್ರಪ್ರಶಸ್ತಿ ವಿಜೇತ ನೇಕಾರರಾದ ದಿ.ಬಿ.ಮಂಜುನಾಥ ಶೆಟ್ಟಿಗಾರ್ ಇವರ ಪುತ್ರರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News