ಉಡುಪಿ ಜಿಲ್ಲೆಯ ಮರಳಿಗೆ ದರ ನಿಗದಿ: ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-09-19 14:09 GMT

ಉಡುಪಿ, ಸೆ.19: ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ 1994ರ ತಿದ್ದುಪಡಿ ನಿಯಮಗಳು 2020ರನ್ವಯ ಸರಕಾರವು ಪ್ರತಿ ಮೆಟ್ರಿಕ್ ಟನ್ ಮರಳಿಗೆ ರಾಜಧನವನ್ನು ಪ್ರಸ್ತುತ 60ರೂ.ನಿಂದ 80ರೂ.ಗೆ ಹೆಚ್ಚಿಸಿದ್ದು, ರಾಜಧನದೊಂದಿಗೆ ಇತರೆ ಶುಲ್ಕಗಳನ್ನು ಪರವಾನಿಗೆ ದಾರರು ಹೆಚ್ಚುವರಿಯಾಗಿ ಸರಕಾರಕ್ಕೆ ಪಾವತಿಸಬೇಕಾಗಿರುವುದರಿಂದ ಜಿಲ್ಲೆಯಲ್ಲಿ ಮರಳಿನ ದರವನ್ನು ಮರುನಿಗದಿಗೊಳಿಸಲಾಗಿದೆ.

ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಇರುವ ಏಳು ಸದಸ್ಯರ ಜಿಲ್ಲಾ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಈ ಹಿಂದೆ ನಿಗದಿಪಡಿಸಿದ್ದ ದರವನ್ನು ಪುನರ್ ಪರಿಶೀಲಿಸಿ ಈ ಕೆಳಕಂಡಂತೆ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ತೆರವುಗೊಳಿಸುವ ಮರಳಿಗೆ ದರವನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ 7 ಸದಸ್ಯರ ಸಮಿತಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷರೂ ಆಗಿರುವ ಜಿ.ಜಗದೀಶ್ ತಿಳಿಸಿದ್ದಾರೆ.

ಕರಾವಳಿ ನಿಯಂತ್ರಣ ವಲಯ ಪ್ರದೇಶದ (ಸಿಆರ್‌ಝಡ್ ಪ್ರದೇಶದ ಸ್ವರ್ಣಾ, ಸೀತಾ ಮತ್ತು ಪಾಪನಾಶಿನಿ ನದಿ ವ್ಯಾಪ್ತಿಗಳಲ್ಲಿ) ಮರಳು ದಿಬ್ಬಗಳನ್ನು ತೆರವುಗೊಳಿಸಿದ ಮರಳಿನ ದರ ಪ್ರತಿ ಟನ್‌ಗೆ (ಸಾಗಾಟ ಪರವಾನಗಿಸಹಿತ) ರೂ.600 (ಹಳೆಯ ದರ 550ರೂ.). ಅಂದರೆ 10 ಮೆಟ್ರಿಕ್ ಟನ್‌ಗೆ 6000 ರೂ. ಹಾಗೂ ಲೋಡಿಂಗ್ ವೆಚ್ಚ- 8ರಿಂದ 10 ಮೆ.ಟನ್ ವಾಹನಕ್ಕೆ ರೂ. 700, 4ರಿಂದ 8ಮೆ.ಟನ್ ವಾಹನಕ್ಕೆ ರೂ. 500, 1ರಿಂದ 4 ಮೆ.ಟನ್ ವರೆಗೆ ರೂ. 300.

ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಾಟ ದ: ದೊಡ್ಡ ಲಾರಿಗೆ: 20ಕಿ.ಮೀ. ವರೆಗೆ ಸಾಗಾಣಿಕೆ ದರ ರೂ. 3000 (8ರಿಂದ 10 ಮೆ.ಟನ್),ನಂತರದ ಪ್ರತಿ ಕಿ.ಮೀ.ಗೆ ರೂ. 50 (20 ಕಿ.ಮೀ.ಹೊರತುಪಡಿಸಿ ನಂತರದ ಪ್ರತಿ ಕಿ.ಮೀ.ಗೆ ಹೋಗುವ ಮತ್ತು ಬರುವ ಕಿ.ಮೀ.ಒಳಗೊಂಡಂತೆ)

ಮಧ್ಯಮ ಗಾತ್ರದ ವಾಹನಗಳಿಗೆ: 20 ಕಿ.ಮೀ.ವರೆಗೆ ಸಾಗಾಣಿಕೆ ದರ ರೂ. 2000ರೂ. (4ರಿಂದ 8 ಮೆ.ಟನ್), ನಂತರದ ಪ್ರತಿ ಕಿ.ಮೀ.ಗೆ ರೂ. 40 (20 ಕಿ.ಮೀ. ಹೊರತುಪಡಿಸಿ ನಂತರದ ಪ್ರತಿ ಕಿ.ಮೀಗೆ ಹೋಗುವ ಮತ್ತು ಬರುವ ಕಿ.ಮೀ.ಸೇರಿದಂತೆ).

ಸಣ್ಣ ವಾಹನಗಳಿಗೆ: 20 ಕಿ.ಮೀ.ವರೆಗೆ ಸಾಗಾಣಿಕೆ ದರ ರೂ.1,500 (1ರಿಂದ 4 ಮೆ.ಟನ್‌ವರೆಗೆ) ಮತ್ತು ನಂತರದ ಪ್ರತಿ ಕಿ.ಮೀ.ಗೆ ರೂ. 35(20 ಕಿ.ಮೀ. ಹೊರತುಪಡಿಸಿ ನಂತರದ ಪ್ರತಿ ಕಿ.ಮೀ.ಗೆ ಹೋಗುವ ಮತ್ತು ಬರುವ ಕಿ.ಮೀ.ಒಳಗೊಂಡಂತೆ).

ಜಿಲ್ಲೆಯಲ್ಲಿ ಮರಳಿಗೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಿಧಿಸಿದಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಡುಪಿ ಜಿಲ್ಲೆ, ಉಡುಪಿ ದೂರವಾಣಿ ಸಂಖ್ಯೆ: 0820-2572333, ಜಿಲ್ಲಾ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ:0820-2574802 1077 (ಟೋಲ್ ಫ್ರೀ)

ಅಧಿಕಾರಿಗಳ ಮೊಬೈಲ್ ಸಂಖ್ಯೆಗಳು: ಆರ್. ಪದ್ಮಶ್ರೀ-ಭೂವಿಜ್ಞಾನಿ: 9980951087, ಗೌತಮ್ ಶಾಸ್ತ್ರಿ ಹೆಚ್.- ಭೂವಿಜ್ಞಾನಿ: 6361286320, ಸಂಧ್ಯಾಕುಮಾರಿ- ಭೂವಿಜ್ಞಾನಿ: 9901370559 ಹಾಜಿರಾ ಸಜಿನಿ ಎಸ್. -ಭೂವಿಜ್ಞಾನಿ: 9663836959.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News