ವರ್ಕಾಡಿ: ಎಸ್.ವೈ.ಎಸ್.ನಿಂದ ಆ್ಯಂಬುಲೆನ್ಸ್ ಲೋಕಾರ್ಪಣೆ

Update: 2020-09-22 06:17 GMT

ಮಂಜೇಶ್ವರ, ಸೆ.22: ಎಸ್ಸೆಸ್ಸೆಫ್, ಎಸ್‌ವೈಎಸ್ ಪೊಯ್ಯತ್ತಬೈಲ್ ಶಾಖೆಯ ವತಿಯಿಂದ ಎಸ್‌ವೈಎಸ್ ಜಿಸಿಸಿ ಪೊಯ್ಯತ್ತಬೈಲ್ ಘಟಕದ ಸಹಕಾರದಲ್ಲಿ ನಾಡಿಗೆ ಸಮರ್ಪಿಸಿದ ಸಾಂತ್ವನ ಆ್ಯಂಬುಲೆನ್ ಲೋಕಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ಯೂತ್ ಸ್ಕ್ವೇರ್‌ನಲ್ಲಿ ನಡೆಯಿತು.

ಸೈಯದ್ ಶಂಸುದ್ದೀನ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. ಯುನಿಟ್ ಅಧ್ಯಕ್ಷ ಅಬೂಬಕರ್ ಕಣಕ್ಕೂರ್ ಅಧ್ಯಕ್ಷತೆ ವಹಿಸಿದ್ದರು.

ಮುಹಮ್ಮದ್ ಸಖಾಫಿ ತೋಕೆ, ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು, ಪೊಯ್ಯತ್ತಬೈಲ್ ಜಮಾಅತ್ ಅಧ್ಯಕ್ಷ ಡಿ.ಎಂ.ಕೆ.ಮುಹಮ್ಮದ್, ವರ್ಕಾಡಿ ಪಂಚಾಯತ್ ಅಧ್ಯಕ್ಷ ಪಿ.ಬಿ.ಅಬ್ದುಲ್ ಮಜೀದ್, ಪಂಚಾಯತ್ ಸದಸ್ಯ ವಸಂತ ಮುಖ್ಯ ಅತಿಥಿಗಳಾಗಿದ್ದರು.

ಜಿಸಿಸಿ ಪ್ರತಿನಿಧಿಗಳಾದ ಕಾಸಿಂ, ಲತೀಫ್ ಕೆ.ಕೆ., ಹನೀಫ್ ಅಡಕ್ಕಳಕಟ್ಟೆ, ಕರೀಂ ಕಣಂತೂರು, ಅಬೂಬಕರ್ ಸಅದಿ, ಮುನೀರ್ ಲತೀಫಿ ವೇದಿಕೆಯಲ್ಲಿದ್ದರು.

ಇಬ್ರಾಹೀಂ ಮಾಸ್ಟರ್ ಪಾಲೆಂಗಿರಿ, ಅಬೂಬಕ್ಕರ್ ಹಾಜಿ ಕೆ.ಕೆ., ಸಿದ್ದೀಖ್ ಪುರುಷಂಗೋಡಿ, ಫಾರೂಖ್ ಪುರುಷಂಗೋಡಿ, ಇಬ್ರಾಹೀಂ ಬದಿಯಾರ್, ಉಮರ್ ಮದನಿ ಪೊಯ್ಯತ್ತಬೈಲ್, ಅಬ್ದುಲ್ ಕರೀಂ ಡಿ.ಕೆ., ಮುಹಮ್ಮದ್ ಹಾಜಿ ಅಸನಬೈಲ್, ಜಮಾಲ್ ದೈಗೋಳಿ, ಎ.ಬಿ.ಅಬ್ದುರ್ರಹ್ಮಾನ್ ಹಾಜಿ ಧರ್ಮನಗರ, ಮೋನು ಹಾಜಿ ದೈಗೋಳಿ, ಹನೀಫ್ ಸಖಾಫಿ ಕೆ.ಕೆ., ಅಬ್ದುಲ್ಲತೀಫ್ ಸಅದಿ ತಾಮಾರ್, ಸಿದ್ದೀಖ್ ಅಹ್ಸನಿ ಸುಳ್ಯಮೆ, ಮುಹಮ್ಮದ್ ಖಾನ್ ಪೊಯ್ಯತ್ತಬೈಲ್, ಹಾರಿಸ್ ಮುಟ್ಟಿಂಜ ಉಪಸ್ಥಿತರಿದ್ದರು. ಅಬ್ದುಸ್ಸಲಾಂ ಮದನಿ ಸ್ವಾಗತಿಸಿದರು. ಕಾಸಿಂ ಪೊಯ್ಯತ್ತಬೈಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News