ಬಾಲಕೃಷ್ಣ ಮದ್ದೋಡಿಗೆ ಪಿಎಚ್‌ಡಿ ಪದವಿ

Update: 2020-09-22 14:23 GMT

ಉಡುಪಿ, ಸೆ.22: ಬಾಲಕೃಷ್ಣ ಎಸ್.ಮದ್ದೋಡಿ ಮಂಡಿಸಿದ ‘ಭಾರತದ ದಕ್ಷಿಣ ಪಶ್ಚಿಮ ಕರಾವಳಿಯ ಉದ್ಯಾವರ ನದಿ ಜಲಾನಯನ ಪ್ರದೇಶದ ಭೂ -ಮಾಹಿತಿ ಮತ್ತು ಭೂ-ಮೌಲ್ಯಮಾಪನ ಅಧ್ಯಯನಗಳು’ ಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಪಿಎಚ್ ಡಿ ಪದವಿ ಪ್ರಧಾನ ಮಾಡಿ ಗೌರವಿಸಿದೆ.

ಇವರು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ಎನ್.ಉದಯಶಂಕರ್ ಮಾರ್ಗದರ್ಶನ ದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು. ಇವರು ಬೈಂದೂರಿನ ಶ್ರೀನಿವಾಸ್ ರಾಮಕೃಷ್ಣ ಮದ್ದೋಡಿ ಮತ್ತು ಲೀಲಾವತಿ ಮದ್ದೋಡಿ ದಂಪತಿ ಪುತ್ರ ಹಾಗೂ ಮಂಗಳೂು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News