ಹೂಡೆಯ ನೆರೆ ಸಂತ್ರಸ್ಥರಿಗೆ ಸಹಾಯಹಸ್ತ ಚಾಚಿದ ಸಾಲಿಹಾತ್ ಶಿಕ್ಷಣ ಸಂಸ್ಥೆ

Update: 2020-09-22 14:25 GMT

ಉಡುಪಿ, ಸೆ.22: ರವಿವಾರ ಹೂಡೆ ಪರಿಸರದಲ್ಲಿ ಉಂಟಾದ ಭೀಕರ ನೆರೆಯಿಂದಾಗಿ ಸಂತ್ರಸ್ತರಾದ ಹಲವು ಕುಟುಂಬಗಳಿಗೆ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಆಶ್ರಯ ಕಲ್ಪಿಸಲಾಯಿತು.

ಹೂಡೆಯ ಎಚ್‌ಆರ್‌ಎಸ್ ಹಾಗೂ ಸ್ಥಳೀಯರೊಂದಿಗೆ ಸಾಲಿಹಾತ್ ಶಿಕ್ಷಣ ಸಂಸ್ಥೆಯು ಸಂತ್ರಸ್ತರ ನೆರವಿಗೆ ಧಾವಿಸಿತು. ದೋಣಿಯ ಮೂಲಕ ಜನರನ್ನು ಸ್ಥಳಾಂತರ ಮಾಡಿ, ಊಟದ ವ್ಯವಸ್ಥೆ ನೀಡಲಾಯಿತು. ಸಂತ್ರಸ್ತರನ್ನು ಸಾಗಿಸಲು ಶಾಲಾ ಬಸ್ಸಿನ ವ್ಯವಸ್ಥೆ ಮಾಡಲಾಯಿತು.

ಈ ಸೇವಾ ಕಾರ್ಯದಲ್ಲಿ ಸಾಲಿಹಾತ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರೀಸ್ ಹೂಡೆ, ಕಾರ್ಯದರ್ಶಿ ಜಿ.ಇಮ್ತಿಯಾಝ್, ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಶಾಖೆಯ ಅಧ್ಯಕ್ಷರು ಹಾಗೂ ಟ್ರಸ್ಟ್ನ ಖಜಾಂಚಿ ಅಬ್ದುಲ್ ಖಾದರ್, ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ, ಶೋಯಿಬ್ ಮಲ್ಪೆಹಾಗೂ ಝೈನುಲ್ ಅಬಿದ್ದೀನ್ ಹೂಡೆ ಸಕ್ರೀಯರಾಗಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News