ಸೆ. 27ರಂದು 'ಬದಲಾಗದವರು' ಕಿರು ಚಿತ್ರಕ್ಕೆ ಮುಹೂರ್ತ

Update: 2020-09-24 07:38 GMT

ಮಂಗಳೂರು, ಸೆ. 24: ಕಾದಂಬರಿಕಾರ ಪಿ.ವಿ. ಪ್ರದೀಪ್ ಕುಮಾರ್ ಪರಿಕಲ್ಪನೆಯಲ್ಲಿ ಮೂಡಿಬರಲಿರುವ ‘ಬದಲಾಗದವರು, ಜೀವನಲ್ಲಿ ಬದಲಾಗುವರೇ’ ಎಂಬ ಟ್ಯಾಗ್‌ಲೈನ್‌ನಡಿ ಚಿತ್ರೀಕರಣಗೊಳ್ಳಲಿರುವ ಕಿರುಚಿತ್ರಕ್ಕೆ ಸೆ. 27ರಂದು ಮುಹೂರ್ತ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಕಿರುಚಿತ್ರದ ನಿರ್ಮಾಪಕರಾದ ಡಾ. ಸತೀಶ್ ಎನ್. ಬಂಗೇರ ಅಂದು ಬೆಳಗ್ಗೆ 10.30ಕ್ಕೆ ಉರ್ವಾಸ್ಟೋರ್‌ನ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಲಿದೆ ಎಂದರು.

ಪ್ರಮುಖ ಪಾತ್ರದಲ್ಲಿ ಸೌಜನ್ಯ ಹೆಗ್ಡೆ ನಟಿಸಲಿದ್ದು, ಕಾಸರಗೋಡು ಅಶೋಕ್ ಕುಮಾರ್, ರೈಮಂಡ್ ಡಿಕುನ್ನ ತಾಕೊಡೆ, ವಿನೀತ್ ಮಳಲಿ, ಡಾ. ಸುರಶ್ ನೆಗರಗುಳಿ, ಕಟತ್ತಿಲ್ಲ ಗೋಪಾಲಕೃಷ್ಣ ಭಟ್ ಮೊದಲಾದ ಕಲಾವಿದರು ಈ ಕಿರುಚಿತ್ರದಲ್ಲಿ ನಟಿಸಲಿದ್ದಾರೆ. 90 ನಿಮಿಷಗಳ ಕಿರುಚಿತ್ರ ಇದಾಗಿದ್ದು, ಇದನ್ನು ವಿ4 ಸ್ಕ್ರೀನ್ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಡಾ. ಸತೀಶ್ ತಿಳಿಸಿದರು.

ನಗರದ ಸುತ್ತಮುತ್ತ 10 ದಿನಗಳ ಈ ಕಿರುಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಸೌಜನ್ಯ ಹೆಗ್ಡೆ, ಪಿ.ವಿ. ಪ್ರದೀಪ್ ಕುಮಾರ್, ವಿವೇಕಾನಂದ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News