ಮಣಿಪಾಲ: ಸೆ.29ರಂದು ಎಸ್ಪಿಬಿಗೆ ಗಾನ ನಮನ

Update: 2020-09-28 14:02 GMT

ಉಡುಪಿ, ಸೆ. 28: ಮಣಿಪಾಲ ರೋಟರಿ ಹಿಲ್ಸ್ ಹಾಗೂ ಮಣಿಪಾಲ ಕರೋಕೆ ತಂಡದ ಸದಸ್ಯರಿಂದ ಇತ್ತೀಚೆಗೆ ನಿಧನರಾದ ದಕ್ಷಿಣ ಭಾರತದ ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸುಮಧುರ ಹಾಡುಗಳ ಮೂಲಕ ‘ಗಾನಗಂಧರ್ವರಿಗೆ ಗಾನ ನಮನ’ ಕಾರ್ಯಕ್ರಮ, ಸೆ.29ರ ಮಂಗಳವಾರ ಸಂಜೆ 5:30ಕ್ಕೆ ಮಣಿಪಾಲದ ಮಣ್ಣಪಳ್ಳದಲ್ಲಿರುವ ರೋಟರಿ ಭವನದಲ್ಲಿ ಜರಗಲಿದೆ ಎಂದು ಮಣಿಪಾಲ ಕರೋಕೆ ತಂಡದ ಗಾಯಕರೂ, ಕಾರ್ಯಕ್ರಮದ ಸಂಚಾಲಕರೂ ಆದ ಉಮೇಶ್ ಮಣಿಪಾಲ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News