ರೈತ ಮಹಿಳೆಯರಿಗೆ ಸಾಂಸ್ಕೃತಿಕ ಕಾರ್ಯಕ್ರಮ

Update: 2020-09-28 14:37 GMT

ಉಡುಪಿ, ಸೆ.28: ಮಹಾತ್ಮ ಗಾಂಧೀಜಿ ಅವರ 151ನೇ ಜನ್ಮ ಸಪ್ತಾಹದ ಅಂಗವಾಗಿ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ನೆಹರು ಯುವ ಕೇಂದ್ರ ಉಡುಪಿ ಮತ್ತು ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿ ಚೇರ್ಕಾಡಿ ಇವರ ಸಹಭಾಗಿತ್ವದಲ್ಲಿ ಪೇತ್ರಿ, ಚೇರ್ಕಾಡಿಯಲ್ಲಿ ಶನಿವಾರ, ಮಕ್ಕಳು ಮತ್ತು ರೈತ ಮಹಿಳೆಯರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆ, ದೇಶಭಕ್ತಿ ಗೀತೆ, ಭಾಷಣ, ಆಶುಭಾಷಣ ಮತ್ತು ಚಿತ್ರಕಲೆ, ಪ್ರಬಂಧ ಮತ್ತು ಚಿತ್ರಕಲೆ ಮುಂತಾದ ಕಾರ್ಯ್ರಮಗಳನ್ನು ಆಯೋಜಿಸಲಾಗಿತ್ತು.

ರೈತ ಮಹಿಳೆಯರು ಔಷಧಿ ಸಸ್ಯಗಳು ಮತ್ತು ವಿವಿಧ ತರಕಾರಿ ಬೀಜಗಳ ಗುರುತಿಸುವಿಕೆ, ಗುಂಪು ಚರ್ಚೆ (ಸಾವಯವ ಕೃಷಿ) ಇತ್ಯಾದಿ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಸಮೃದ್ಧಿ ಮಹಿಳಾ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News