ಜುಗಾರಿ ನಿರತ ಆರೋಪ : 16 ಮಂದಿಯ ಬಂಧನ

Update: 2020-09-28 16:10 GMT

ಕುಂದಾಪುರ, ಸೆ.28: ಕುಂದಾಪುರ ಸಂಗಂ ಸೇತುವೆ ಬಳಿ ಸೆ.27ರಂದು ಹೌಸಿ ಹೌಸಿ ಜುಗಾರಿ ಆಡುತ್ತಿದ್ದ ಖಾರ್ವಿಕೇರಿಯ ಅಶೋಕ ಖಾರ್ವಿ (23), ಹರ್ಷವರ್ಧನ(28), ಪ್ರಶಾಂತ ಖಾರ್ವಿ(28), ಸಂತೋಷ ಖಾರ್ವಿ(29), ನಿತೇಶ್ ಖಾರ್ವಿ(25), ಮೇಲ್ಕೇರಿಯ ನಿಶಾನ್(27), ಕಿಶನ್(25), ದಿಲೀಪ್ (25), ಗುಣವರ್ಧನ (22), ಧೀರಜ್(24) ಎಂಬವರನ್ನು ಕುಂದಾಪುರ ಪೊಲೀಸರು ಬಂಧಿಸಿ, ನಗದು ವಶಪಡಿಸಿಕೊಂಡಿದ್ದಾರೆ.

ಪಡುಬಿದ್ರಿ: ಎಲ್ಲೂರು ಗ್ರಾಮದ ಕೊಳಚೂರು ಎಂಬಲ್ಲಿರುವ ಹಾಡಿ ಯಲ್ಲಿ ಸೆ.27ರಂದು ಬೆಳಗ್ಗೆ 10ಗಂಟೆ ಸುಮಾರಿಗೆ ಇಸ್ಪೀಟು ಜುಗಾರಿ ಆಡುತ್ತಿದ್ದ ಪಾದೆಬೆಟ್ಟುವಿನ ಗಣೇಶ (35), ದಯಾನಂದ ಪೂಜಾರಿ (38), ಗಂಗಾಧರ (45), ಒರಲಬೆಟ್ಟುವಿನ ಶರತ್ ಪೂಜಾರಿ(27), ನಂದಿಕೂರಿನ ಸುಂದರ (62), ಗಣೇಶ(30) ಎಂಬವರನ್ನು ಪಡುಬಿದ್ರಿ ಪೊಲೀಸರು ಬಂಧಿಸಿ, ನಗದು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News