ಸಾರ್ವಜನಿಕ ರಸ್ತೆ ಧ್ವಂಸ : ಆರೋಪಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ

Update: 2020-09-28 16:13 GMT

ಕಾರ್ಕಳ, ಸೆ. 28: ದುರ್ಗಾ ಗ್ರಾಮದ ಕಡೆಪೊರಾಲು ಎಂಬಲ್ಲಿ ಸಾರ್ವಜನಿಕ ರಸ್ತೆಯನ್ನು ಧ್ವಂಸ ಮಾಡಿರುವ ಆರೋಪಿ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಜು.31ರಂದು 8ಗಂಟೆಗೆ ಸರಕಾರಿ ಸರ್ವೆ ನಂಬ್ರ: 179/1ರಲ್ಲಿ ಸರ್ವೆ ನಂಬ್ರ: 264ರಲ್ಲಿ ಇದ್ದ ಮಲಕುಡಿಯ ಕಾಲೋನಿಯ ಸಾರ್ವಜನಿಕ ರಸ್ತೆ ಯನ್ನು ಪ್ರಭಾಕರ ನಾಯ್ಕ ಎಂಬಾತ ದ್ವಂಸ ಮಾಡಿದ ಬಗ್ಗೆ ಕಾರ್ಕಳ ತಾಲೂಕು ದಂಡಾಧಿಕಾರಿಯವರು ಕರ್ನಾಟಕ ಭೂಕಂದಾಯ ಅಧಿನಿ ಯಮ ಪ್ರಕಾರ ಆರೋಪಿತನ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆ ವರದಿ ನೀಡಿದ್ದರು. ಅದರಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕಲಂ: 192(ಎ) ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ನಂತೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News