​ಸೆ. 30ರಂದು ರಕ್ತದಾನ ಶಿಬಿರ

Update: 2020-09-28 16:43 GMT

ಉಪ್ಪಿನಂಗಡಿ : ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯ ಹಾಗೂ ಎಸ್ಕೆಎಸ್ಸೆಸ್ಸೆಫ್ ವಿಖಾಯ ಉಪ್ಪಿನಂಗಡಿ ವಲಯದ ವತಿಯಿಂದ ಸೆ.30ರಂದು ಉಪ್ಪಿನಂಗಡಿಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಇಲ್ಲಿನ ಮಾಲಿಕ್‍ದ್ದೀನಾರ್ ಜುಮಾ ಮಸೀದಿ ಹಾಗೂ ವೆನ್ಲಾಕ್ ಹಾಸ್ಪಿಟಲ್‍ನ ಸಹಯೋಗದಲ್ಲಿ ಇಲ್ಲಿನ ಮಸೀದಿಯ ಎಂಜೆಎಂ ಸಭಾಂಗಣದಲ್ಲಿ ಬೆಳಗ್ಗೆ 9ರಿಂದ 10ರವರೆಗೆ ರಕ್ತದಾನ ಶಿಬಿರ ನಡೆಯಲಿದೆ. ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಸೈಯ್ಯದ್ ಅಮೀರ್ ತಂಙಳ್ ಕಿನ್ಯ ದುವಾಶೀರ್ವಚನ ನೀಡಲಿದ್ದು, ಉಪ್ಪಿನಂಗಡಿ ವಲಯದ ಅಧ್ಯಕ್ಷ ಅಶ್ರಫ್ ಬಾಖವಿ ಅಧ್ಯಕ್ಷತೆ ವಹಿಸಲಿದ್ದಾರೆ. ಸೈಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಆತೂರು ಉದ್ಘಾಟನೆ ನೆರವೇರಿಸಲಿದ್ದಾರೆ. ಎಸ್ಕೆಎಸ್ಸೆಸ್ಸೆಫ್ ವಿಖಾಯ ಉಪ್ಪಿನಂಗಡಿ ವಲಯದ ಉಸ್ತುವಾರಿ ಸಿದ್ದೀಕ್ ನೀರಾಜೆ, ಉಪ್ಪಿನಂಗಡಿ ವಲಯ ಕಾರ್ಯದರ್ಶಿ ಹಾರಿಸ್ ಕೌಸರಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News