ಅ.3ರಂದು ಪಂಪ್ ವೆಲ್ ಮಸೀದಿಯಲ್ಲಿ ಬೇಕಲ್ ಉಸ್ತಾದ್ ಅನುಸ್ಮರಣೆ, ಯಶಸ್ವಿಗೆ ಕರೆ

Update: 2020-09-29 15:47 GMT

ಮಂಗಳೂರು: ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ಸ್ಮರಣೆ ಹಾಗೂ ಪ್ರಾರ್ಥನಾ ಸಂಗಮವು ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಆಶ್ರಯದಲ್ಲಿ  ಅ. 3ರಂದು ಬೆಳಗ್ಗೆ 10 ಗಂಟೆಗೆ ಪಂಪ್ ವೆಲ್ ಮಸೀದಿಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಎಸ್ ಇ ಡಿ ಸಿ ಪ್ರತ್ಯೇಕ ಕ್ಯಾಬಿನೆಟ್ ತುರ್ತು ಸಭೆಯು ಇಲ್ಮ್ ಸೆಂಟರ್ ಪಡೀಲ್ ನಲ್ಲಿ ರಾಜ್ಯಾಧ್ಯಕ್ಷ ಕೆ ಕೆ ಎಂ ಕಾಮಿಲ್ ಅಧ್ಯಕ್ಷತೆಯಲ್ಲಿ ನಡೆಯಿತು.

ಒ ಕೆ ಸಈದ್ ಮುಸ್ಲಿಯಾರ್ ದುಆದೊಂದಿಗೆ ಪ್ರಾರಂಭ ಗೊಂಡ ಸಭೆಯನ್ನು ಅತೂರು ಸಈದ್ ಮುಸ್ಲಿಯಾರ್ ಉದ್ಘಾಟಿಸಿದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಜೆಪ್ಪು ಮದನಿ ಸ್ವಾಗತಿಸಿ, ಪಿ ಎಂ ಇಬ್ರಾಹಿಮ್ ನಯೀಮಿ ಮುಳೂರು ವಂದಿಸಿದರು.

ಯಶಸ್ವಿಗೆ ಕರೆ

ಹಾಫಿಳ್ ಹನೀಪ್ ಮಿಸ್ಬಾಯಿ ಮುಪತ್ತಿಸ್, ಹಮೀದ್ ಸಅದಿ ಮೂರುಗೋಳಿ, ಮುಹಮ್ಮದ್ ಸಖಾಫಿ ಸುರತ್ಕಲ್, ಮುತ್ತಲಿಬ್ ಸಖಾಫಿ ಸರಳಿಕಟ್ಟೆ, ಕರ್ನಾಟಕ ರಾಜ್ಯ ‌ಸಖಾಫೀಸ್ ಗೌರವಾಧ್ಯಕ್ಷ  ಅಸ್ಸಯ್ಯಿದ್ ಕಿಲ್ಲೂರ್ ತಂಙಳ್. ರಾಜ್ಯಾಧ್ಯಕ್ಷ ಪಿ. ಪಿ. ಅಹ್ಮದ್ ಸಖಾಫಿ ಕಾಶಿಪಟ್ಣ, ‌ಪ್ರಧಾನ ಕಾರ್ಯದರ್ಶಿ ಕೆ.ಕೆ.ಎಂ ಕಾಮಿಲ್ ಸುರಿಬೈಲ್, ಕೋಶಾಧಿಕಾರಿ ಅಸಯ್ಯಿದ್ ಇಲ್ಯಾಸ್ ತಂಙಳ್ ಎಮ್ಮೆಮಾಡು ಕಾರ್ಯಕ್ರಮದ ಯಶಸ್ವಿಗೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News