ಪ್ರಾಕೃತಿಕ ವಿಕೋಪದ ಪರಿಹಾರ ಧನ ಚೆಕ್ ವಿತರಣೆ

Update: 2020-09-29 14:26 GMT

ಬ್ರಹ್ಮಾವರ, ಸೆ.29: ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಕುಟುಂಬಗಳಿಗೆ ಪರಿಹಾರ ಧನದ ಚೆಕ್‌ನ್ನು ಬ್ರಹ್ಮಾವರದ ಶಾಸಕರ ಕಚೇರಿಯಲ್ಲಿ ಇಂದು ವಿತರಿಸಲಾಯಿತು.

ವಾರಂಬಳ್ಳಿ ಗ್ರಾಮದ ರಂಜನ್ 39,942ರೂ., ಅರುಣಾ ಶೆಟ್ಟಿಗಾರ್ 11,000ರೂ., ಹೇರೂರು ಗ್ರಾಮದ ಸುಶೀಲಾ ಶೆಡ್ತಿ 55,000ರೂ., ಹಾರಾಡಿ ಗ್ರಾಮದ ಜಯಂತಿ 22,000ರೂ., ಆನಂದ ಅಮೀನ್ 24,726ರೂ., ಚೇರ್ಕಾಡಿ ಗ್ರಾಮದ ಯಶೋಧ 20,000ರೂ., ಕಳ್ತೂರು ಗ್ರಾಮದ ಸುಶೀಲಾ 39,942ರೂ., ಉಪ್ಪೂರು ಗ್ರಾಮದ ಪೀಟರ್ ಡಿಸೋಜ 35,000ರೂ., ರಾಘವೇಂದ್ರ ರಾವ್ 35,000ರೂ.ಗಳ ಚೆಕ್ ಸೇರಿದಂತೆ 9 ಕುಟುಂಬಗಳಿಗೆ ಒಟ್ಟು 2,80,610ರೂ. ಮೊತ್ತದ ಚೆಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ವೀಣಾ ನಾಯ್ಕ್, ಪ್ರಧಾನ ಕಾರ್ಯದರ್ಶಿ ಅಶೋಕ್ ಹೇರೂರು, ಚಾಂತಾರು ಗ್ರಾಪಂ ಮಾಜಿ ಉಪಾಧ್ಯಕ್ಷ ಉದಯ ಕಾಮತ್, ಉಪ್ಪೂರು ಗ್ರಾಪಂ ಮಾಜಿ ಸದಸ್ಯ ನಿತ್ಯಾನಂದ, 38ನೇ ಕಳ್ತೂರು ಗ್ರಾಪಂ ಮಾಜಿ ಸದಸ್ಯ ರಮಾಕಾಂತ್ ಕಾಮತ್ ಮತ್ತು ಬ್ರಹ್ಮಾವರ ತಾಲೂಕು ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News