ಅ.1ರಿಂದ ಅಂಬಾರಿ, ರಾಜಹಂಸ ಬಸ್ ಆರಂಭ

Update: 2020-09-29 16:05 GMT

ಮಂಗಳೂರು, ಸೆ.29: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಂಗಳೂರು- ಹೈದರಾಬಾದ್ ಮಾರ್ಗದಲ್ಲಿ ಅಂಬಾರಿ ಡ್ರೀಮ್‌ಕ್ಲಾಸ್ ಮಲ್ಟಿಅಕ್ಸ್‌ಲ್ ಎ.ಸಿ. ಸ್ಲೀಪರ್ ವಾಹನ ಹಾಗೂ ಉಡುಪಿ- ಹೈದರಾಬಾದ್ ಮಾರ್ಗದಲ್ಲಿ ರಾಜಹಂಸ ವಾಹನಗಳು ಪ್ರಯಾಣಿಕರ ಅನುಕೂಲಕ್ಕಾಗಿ ಅ. 1ರಿಂದ ಆರಂಭಗೊಳ್ಳಲಿವೆ.

ಅಂಬಾರಿ: ಅಂಬಾರಿ ಡ್ರೀಮ್‌ಕ್ಲಾಸ್ ಮಲ್ಟಿಆ್ಯಕ್ಸೆಲ್ ಎ.ಸಿ. ಸ್ಲೀಪರ್ ಬಸ್ ಮಂಗಳೂರಿನಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ಸುರತ್ಕಲ್, ಮುಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಹುಬ್ಬಳ್ಳಿ, ಗದಗ, ಕೊಪ್ಪಳ, ರಾಯಚೂರು, ಹೈದರಾಬಾದ್‌ಗೆ ಮಾರನೇ ದಿನ ಬೆಳಗ್ಗೆ 8:30ಕ್ಕೆ ತಲುಪಲಿದೆ. ಪ್ರಯಾಣ ದರ 1,700 ರೂ.

ಹೈದರಾಬಾದ್‌ನಿಂದ ಸಂಜೆ 5 ಗಂಟೆಗೆ ನಿರ್ಗಮಿಸುವ ಬಸ್ ರಾಯಚೂರು, ಕೊಪ್ಪಳ, ಗದಗ, ಹುಬ್ಬಳ್ಳಿ, ಭಟ್ಕಳ, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್ ಮೂಲಕ ಮಂಗಳೂರಿಗೆ ಮಾರನೇ ದಿನ ಬೆಳಗ್ಗೆ 10 ಗಂಟೆಗೆ ತಲುಪಲಿದೆ. ಪ್ರಯಾಣ ದರ 1,700 ರೂ.

ರಾಜಹಂಸ: ರಾಜಹಂಸ ಬಸ್ ಉಡುಪಿಯಿಂದ ಬೆಳಗ್ಗೆ 11:30ಕ್ಕೆ ಹೊರಟು ಮಣಿಪಾಲ್, ಕುಂದಾಪುರ, ಸಿದ್ದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಹರಿಹರ, ಹರಪ್ಪನಹಳ್ಳಿ, ಹೊಸಪೇಟೆ, ಗಂಗಾವತಿ, ಮಾನ್ವಿ, ರಾಯಚೂರು, ಹೈದರಾಬಾದ್‌ಗೆ ಮಾರನೇ ದಿನ ಬೆಳಗ್ಗೆ 6:30ಕ್ಕೆ ತಲುಪಲಿದೆ. ಪ್ರಯಾಣ ದರ 970 ರೂ.

ಹೈದರಾಬಾದ್‌ನಿಂದ ಸಂಜೆ 5:30ಕ್ಕೆ ನಿರ್ಗಮಿಸುವ ಬಸ್ ಹರಪ್ಪನಹಳ್ಳಿ, ಹರಿಹರ, ಶಿವಮೊಗ್ಗ, ತೀರ್ಥಹಳ್ಳಿ, ಸಿದ್ದಾಪುರ, ಕುಂದಾಪುರ, ಮಣಿಪಾಲ್, ಉಡುಪಿಗೆ ಮಾರನೇ ದಿನ ಬೆಳಗ್ಗೆ 11 ಗಂಟೆಗೆ ತಲುಪಲಿದೆ. ಪ್ರಯಾಣ ದರ 970 ರೂ.

ಎಸ್‌ಒಪಿಯ (Standard operating procedure) ನಿರ್ದೇಶನಗಳಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾ ಗುತ್ತದೆ. ಸಾರಿಗೆಗೆ ‘ಅವತಾರ್’ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದೆ. ಸಾರ್ವಜನಿಕರು ಸಾರಿಗೆಯ ಸದುಪಯೋಗ ಪಡೆದುಕೊಳ್ಳುಬೇಕು ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News