ಉತ್ತರಪ್ರದೇಶ: ಗೋರಖನಾಥ ದೇವಾಲಯ ಸ್ಫೋಟಿಸುವ ಬೆದರಿಕೆ ಕರೆ; ಓರ್ವನ ಬಂಧನ

Update: 2020-09-30 17:06 GMT

ಗೋರಖ್‌ಪುರ (ಉತ್ತರಪ್ರದೇಶ), ಸೆ. 30: ಇಲ್ಲಿನ ಗೋರಖನಾಥ ದೇವಾಲಯವನ್ನು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ. ಶಿವೇಂದ್ರ ಸಿಂಗ್ ಎಂಬ ವ್ಯಕ್ತಿ ಎಸ್‌ಎಸ್‌ಪಿಗೆ ಕರೆ ಮಾಡಿ, ‘‘ನಾನು ಬೇಡೋಲಿ ಬಾಬು ಗ್ರಾಮದಿಂದ ಮಾತನಾಡುತ್ತಿದ್ದೇನೆ ಹಾಗೂ ನಾನು ನನ್ನ ಸಹಚರರೊಂದಿಗೆ ಗೋರಖ್‌ನಾಥ ದೇವಾಲಯವನ್ನು ಸ್ಫೋಟಿಸಲಿದ್ದೇವೆ’’ ಎಂದು ಬೆದರಿಕೆ ಒಡ್ಡಿದ್ದಾನೆ.

ಈ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ಗೋರಖ್‌ನಾಥ ದೇವಾಲಯಕ್ಕೆ ಭದ್ರತೆ ಒದಗಿಸಿದ್ದಾರೆ. ‘‘ಆತ ನನಗೆ ಕರೆ ಮಾಡಿ 24 ಗಂಟೆಗಳ ಒಳಗೆ ದೇವಾಲಯ ಸ್ಫೋಟಿಸಲಾಗುವುದು ಎಂದು ಬೆದರಿಕೆ ಒಡ್ಡಿದ್ದ. ಸಾಧ್ಯವಾದರೆ ತಡೆಯಿರಿ ಎಂದು ಸವಾಲು ಹಾಕಿದ್ದ ಎಂದು ಎಸ್‌ಎಸ್‌ಪಿ ಜೋಗೇಂದ್ರ ಕುಮಾರ್ ಹೇಳಿದ್ದಾರೆ. ಎಸ್‌ಎಸ್‌ಪಿ ಅವರಿಗೆ ಕರೆ ಮಾಡಿದ ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅನಂತರ ಕೆಲವು ಗಂಟೆಗಳ ಬಳಿಕ ಆತನನ್ನು ಬಂಧಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News