×
Ad

ದಲಿತ ಮುಖಂಡನ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ತೇಜಸ್ವಿ ಯಾದವ್ ಆಗ್ರಹ

Update: 2020-10-08 13:44 IST

 ಪಾಟ್ನಾ: ದಲಿತ ಮುಖಂಡನ ಕೊಲೆ ಪ್ರಕರಣದ ಎಫ್‌ಐಆರ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿರುವುದಕ್ಕೆ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ತೇಜಸ್ವಿ, ನನ್ನನ್ನು ಬಂಧಿಸಿ ಅಥವಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಎಂದು ಒತ್ತಾಯಿಸಿದರು.
ಕೆಲಸದ ಒತ್ತಡದಿಂದ ನಾನು ಘಟನೆಯ ಬಗ್ಗೆ ತಡವಾಗಿ ತಿಳಿದುಕೊಂಡೆ. ಇದಕ್ಕೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ನನ್ನ ಹಾಗೂ ಸಹೋದರನ ಹೆಸರನ್ನು ದಾಖಲಿಸಲಾಗಿದೆ. ಆ ನಂತರ ಹಲವು ಮಾಧ್ಯಮಗಳಲ್ಲಿ ಕಥೆ ಬರಲು ಆರಂಭಿಸಿದೆ. ಈ ಸಂಬಂಧ ನಿಮ್ಮ ವಕ್ತಾರರು ಕೀಳು ಹೇಳಿಕೆ ನೀಡಲಾರಂಭಿಸಿದ್ದಾರೆ. ಇವೆಲ್ಲವುಗಳ ಹೊರತಾಗಿ ಕಾನೂನು ತ್ವರಿತ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ಭಾವಿಸಿದ್ದೇನೆ ಎಂದು ಯಾದವ್ ಪತ್ರದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News