ಹೆಜಮಾಡಿ : ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Update: 2020-10-12 05:29 GMT

ಪಡುಬಿದ್ರೆ : ಹೆಜಮಾಡಿಯಲ್ಲಿ ರವಿವಾರ ಸಂಜೆ ಸಂಭವಿಸಿದ ಮೀನುಗಾರಿಕಾ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರನೋರ್ವನ ಮೃತಹದೇಹ ರಾತ್ರಿ 2 ಗಂಟೆಗೆ ಪತ್ತೆಯಾಗಿದೆ.

ರವಿವಾರ ಸಂಜೆ ಹೆಜಮಾಡಿ ಕೋಡಿ ಏಕನಾಥ  ಕರ್ಕೇರ ಅವರ ಯಾಂತ್ರಿಕೃತ ದೋಣಿಯಲ್ಲಿ ಮೀನುಗಾರಿಗೆಗೆ ತೆರಳಿದ್ದ ವೇಳೆ ಸಮುದ್ರದ  ಅಲೆಗಳ ಒತ್ತಡಕ್ಕೆ ಸಿಲುಕಿ ದೋಣಿ ಮುಳುಗಡೆಯಾಗಿತ್ತು.

ಘಟನೆಯಿಂದ ಹೆಜಮಾಡಿ ಕೋಡಿಯ ಸುಕೇಶ್ (25) ಎಂಬವರು ನಾಪತ್ತೆಯಾಗಿದ್ದರು. ಸಮುದ್ರದಲ್ಲಿ ಈಜುತ್ತಿರುವುದನ್ನು ಕಂಡ ಮೀನುಗಾರಿಕೆ ನಡೆಸುತಿದ್ದ ಇನ್ನೆರಡು ದೋಣಿಯಲ್ಲಿದ್ದವರು. ಏಕನಾಥ ಕರ್ಕೇರ, ನಾಗೇಶ್ ಪಾಂಡುರಂಗ, ನೀರಾಜ್, ರಾಜೇಶ್ ಅವರನ್ನು ರಕ್ಷಿಸಿದ್ದರು.

ನಾಪತ್ತೆಯಾಗಿದ್ದ ಸುಕೇಶ್‌ಗಾಗಿ ಹುಡುಕಾಟ ನಡೆದಿತ್ತು. ರಾತ್ರಿ 2ಗಂಟೆಯ ಸುಮಾರಿಗೆ ಹೆಜಮಾಡಿಯ ಕಾವಲು ಪೊಲೀಸ್ ಠಾಣೆಯ ಸುಮಾರು 500 ಮೀಟರ್ ದಕ್ಷಿಣ ದಿಕ್ಕಿನ ಸಮುದ್ರ ದಂಡೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News