ಹದಗೆಟ್ಟ ಗಂಗೊಳ್ಳಿ ರಸ್ತೆ: ಮಳೆಯ ಕೆಸರು ನಿಂತು ಸಂಚಾರಕ್ಕೆ ತೊಂದರೆ

Update: 2020-10-15 07:47 GMT

ಗಂಗೊಳ್ಳಿ :  ಜಾಮಿಯಾ ಮಸೀದಿಗೆ ಹೋಗುವ ಮುಖ್ಯ ರಸ್ತೆ ಹಾಗೂ ವಾಟರ್ ಟ್ಯಾಂಕ್ ಎದುರಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಮಳೆಯ ಕೆಸರು ನೀರು ನಿಂತು ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ನಡೆಯಲು ಅನಾನುಕೂಲವಾಗುತ್ತಿದೆ, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ರಸ್ತೆಯಲ್ಲಿ ನಡೆದಾಡುವ ಪಾದಚಾರಿಗಳಿಗೆ ಕೆಸರು ನೀರಿನ ಅಭಿಷೇಕದ ಕೆಟ್ಟ ಅನುಭವ ಆಗುತ್ತಿದೆ. ಜೋರು ಮಳೆಯಾದಾಗ ಇಡೀ ರಸ್ತೆ ನೀರಿನಿಂದ ಜಲಾವೃತಗೊಳ್ಳುತ್ತದೆ ಎಂದು ಸ್ಥಳೀಯರು ದೂರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News