ವಿಟ್ಲ : ಎಸ್ ವೈ.ಎಸ್. ವತಿಯಿಂದ ಮದ್ರಸ ಅಧ್ಯಾಪಕರಿಗೆ ದಿನಸಿ ಕಿಟ್ ವಿತರಣೆ

Update: 2020-10-16 12:20 GMT

ವಿಟ್ಲ : ಕೋವಿಡ್ ಕಾರಣದಿಂದ ಕೆಲಸ ಹಾಗೂ ವೇತನವಿಲ್ಲದೆ ಸಂಕಷ್ಟದಲ್ಲಿರುವ ಮದ್ರಸ ಅಧ್ಯಾಪಕರ ಕುಟುಂಬಕ್ಕೆ ವಿಟ್ಲ ವಲಯ ಎಸ್.ವೈ.ಎಸ್. ವತಿಯಿಂದ ದಿನ ಬಳಕೆಯ ಅಗತ್ಯ ಸಾಮಾನುಗಳ ಕಿಟ್ ಗಳನ್ನು ವಿಟ್ಲದಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಲಯಾಧ್ಯಕ್ಷ ಕೆ.ಎಲ್.ಉಮರ್ ದಾರಿಮಿ ಮಾತನಾಡಿ ಇಂದಿನ ಸಂದಿಗ್ಧ ಘಟ್ಟದಲ್ಲಿ ಅದೆಷ್ಟೋ ಮದ್ರಸ ಅಧ್ಯಾಪಕರ ಕುಟುಂಬ ಸಂಕಷ್ಟದಲ್ಲಿದ್ದು, ಅಂತಹ ಕುಟುಂಬಗಳಿಗೆ ನೆರವಾಗಲು ಸಂಘಸಂಸ್ಥೆಗಳು ಹಾಗೂ ದಾನಿಗಳು ಮುಂದೆ ಬರಬೇಕೆಂದು ಕರೆ ನೀಡಿದರು.

ಕಾರ್ಯಕ್ರಮವನ್ನು  ಹನೀಫ್ ದಾರಿಮಿ ಸವಣೂರು ಉದ್ಘಾಟಿಸಿದರು.‌ ಸಂಘಟನಯ ಕೋಶಾಧಿಕಾರಿ ಪಿ.ಎಂ.ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಪರ್ತಿಪ್ಪಾಡಿ ಜಮಾಅತ್ ಕಾರ್ಯದರ್ಶಿ ಖಲಂದರ್ ಪರ್ತಿಪ್ಪಾಡಿ, ಎಸ್ಕೆಎಸ್ಸಸ್ಸೆಫ್ ಸಾಲೆತ್ತೂರು ಕ್ಲಸ್ಟರ್ ಅಧ್ಯಕ್ಷ ಅಬ್ದುಸಲೀಂ ಪರ್ತಿಪ್ಪಾಡಿ, ಪರ್ತಿಪ್ಪಾಡಿ ಎಸ್.ವೈ.ಎಸ್. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮಾಮು ಟಿಪ್ಪು ನಗರ, ಉಬೈದ್ ವಿಟ್ಲ ಬಝಾರ್, ಅಬ್ದುರ್ರಹೀಂ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News