ಮಂಗಳೂರು ಮನಪಾ ಎದುರು ದಸಂಸ ಧರಣಿ

Update: 2020-10-19 07:13 GMT

ಮಂಗಳೂರು, ಅ.19: ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ  ಹೊರ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಒಳ ಚರಂಡಿ ವಿಭಾಗದ ಕಾರ್ಮಿಕರ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ವತಿಯಿಂದ ಸೋಮವಾರ ಮನಪಾ ಕಚೇರಿ ಮುಂದೆ ಧರಣಿ ನಡೆಯಿತು.

ಸಮಸ್ಯೆಯನ್ನು ಬಗೆಹರಿಸಲು ನಗರ ಪಾಲಿಕೆ ಅಥವಾ ಗುತ್ತಿಗೆದಾರರು ಸ್ಪಂದಿಸದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಧರಣಿನಿರತರು ಆಪಾದಿಸಿದರು.  ದಸಂಸ ಮುಖಂಡರಾದ ಜಗದೀಶ್ ಪಾಂಡೇಶ್ವರ, ನಾಗೇಶ್ ಮುಲ್ಲಕಾಡು, ಸಂಜೀವ ಉಳಾಯಿಬೆಟ್ಟು, ಪ್ರೇಮ್ ಕುಮಾರ್ ಬಲ್ಲಾಳ್ ಬಾಗ್,  ಪದ್ಮನಾಭ ವಾಮಂಜೂರು, ರಾಜೇಶ್ ಪೆರ್ನಾಜೆ, ಸತೀಶ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News