ಹೊಟೇಲಿನಲ್ಲಿ ಮದ್ಯ ಮಾರಾಟ: ನಾಲ್ವರ ಬಂಧನ

Update: 2020-10-20 17:16 GMT

ಕೊಲ್ಲೂರು, ಅ.20: ಚಿತ್ತೂರು ಗ್ರಾಮದ ಆಲೂರು ಕ್ರಾಸ್ ಸಮೀಪದ ಕರಾವಳಿ ಹೊಟೇಲ್ನಲ್ಲಿ ಅ.19ರಂದು ಅನುಮತಿ ಇಲ್ಲದೆ ಮದ್ಯಪಾನ ಮಾಡುತ್ತಿದ್ದ ನಾಲ್ಕು ಮಂದಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ.

ಮದ್ಯಪಾನ ಮಾಡುತ್ತಿದ್ದ ಅನಿಲ್ ಕುಮಾರ್ ಶೆಟ್ಟಿ, ರವಿ ಶೆಟ್ಟಿ, ವಿಜಯ ಆಚಾರ್ಯ ಹಾಗೂ ಮದ್ಯ ಸರಬರಾಜು ಮಾಡುತ್ತಿದ್ದ ಅಶೋಕ್ ಶೆಟ್ಟಿ ಬಂಧಿತ ಆರೋಪಿಗಳು.

ಅಶೋಕ್ ಶೆಟ್ಟಿ ಸ್ವಂತ ಲಾಭಕ್ಕೋಸ್ಕರ ಚಿತ್ತೂರಿನ ಬಾರ್ನಿಂದ ಮದ್ಯವನ್ನು ತರಿಸಿ ಸಾರ್ವಜನಿಕರಿಗೆ ಹೊಟೇಲಿನಲ್ಲಿ ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ. ಹೊಟೇಲಿನಲ್ಲಿದ್ದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News