ತುಳು ಚಲನಚಿತ್ರ ನಟ ಸುರೇಂದ್ರ ಬಂಟ್ವಾಳ್ ಹತ್ಯೆ

Update: 2020-10-21 10:28 GMT

ಬಂಟ್ವಾಳ: ತುಳು ಚಿತ್ರರಂಗದ ಚಾಲಿಪೋಲಿಲು ಖ್ಯಾತಿಯ ಸುರೇಂದ್ರ ಬಂಟ್ವಾಳ್ ಅವರನ್ನು ದುಷ್ಕರ್ಮಿಗಳು ಹತ್ಯೆ ಗೈದಿದ್ದಾರೆ.

ಬಿ.ಸಿ.ರೋಡ್ ನ ಭಂಡಾರಿಬೆಟ್ಟು ವಾಸ್ತಿ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ನಿನ್ನೆಯಿಂದಲೇ ಅವರು ಕರೆ ಸ್ವೀಕರಿಸುತ್ತಿರಲಿ. ಇದರಿಂದ ಅನುಮಾನಗೊಂಡು ಮಿತ್ರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರು ತಂಗಿದ್ದ ವಾಸ್ತಿ ಅಪಾರ್ಟ್ ಮೆಂಟ್ ಗೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದಾಗ ಹತ್ಯೆಯ ಘಟನೆ ಬೆಳಕಿಗೆ ಬಂದಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಸುರೇಂದ್ರ ಕಳೆದ ಎರಡು ವರ್ಷಗಳ ಹಿಂದೆ ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರು ಝಳಪಿಸಿ ಕೆಂಗಣ್ಣಿಗೆ ಗುರಿಯಾಗಿದ್ದರು. ಹಿಂದೆ ಸುರೇಂದ್ರ ಮಾಡಿದ ತಲವಾರು ದಾಳಿಯ ದ್ವೇಷವೋ ಅಥವಾ ಬೇರೇನಾದರೂ ಹಳೇ ವೈಷಮ್ಯ ಕೊಲೆಗೆ ಕಾರಣವೇ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸ್ಥಳ ಮಹಜರು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News