ಉಳ್ಳಾಲ: ತರಬೇತಿ, ಮಾಹಿತಿ ಕಾರ್ಯಕ್ರಮ ಹಾಗೂ ಗುರುತಿನ ಚೀಟಿ ವಿತರಣೆ
Update: 2020-10-21 11:41 GMT
ಉಳ್ಳಾಲ: ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಮರ್ಥ್ಯಾಭಿವೃದ್ಧಿ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ತರಬೇತಿ ಮತ್ತು ಆತ್ಮ ನಿರ್ಮರ್ ಸ್ವನಿಧಿ ಮಾಹಿತಿ ಕಾರ್ಯಕ್ರಮವು ಸೋಮೇಶ್ವರ ಪುರಸಭಾ ಸಭಾಂಗಣದಲ್ಲಿ ನಡೆಯಿತು.
ಮುಖ್ಯಾಧಿಕಾರಿ ವಾಣಿ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಡೇ ನಲ್ಮ್ ಯೋಜನೆ ಅಭಿಯಾನದ ವ್ಯವಸ್ಥಾಪಕ ಐರಿನ್ ರೆಬೆಲ್ಲೋ ಮತ್ತು ವಿಶ್ವನಾಥ್ ರಾವ್ ತರಬೇತಿಯನ್ನು ನಡೆಸಿ ಕೊಟ್ಟರು.
ಈ ಸಂದರ್ಭದಲ್ಲಿ 19 ಮಂದಿ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ವಿತರಿಸಲಾಯಿತು. ನಾಲ್ಕು ಮಂದಿ ಸ್ವಸಹಾಯ ಗುಂಪಿನ ಸದಸ್ಯರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ನೀಡಲಾಯಿತು. ಸಮುದಾಯ ಸಂಘಟಕ ರೋಹಿನಾಥ್ ಸ್ವಾಗತಿಸಿದರು. ರೂಪ ಧನ್ಯವಾದ ಸಮರ್ಪಿಸಿದರು.