ದೈವಸ್ಥಾನದಲ್ಲಿ ಕಳವು ಪ್ರಕರಣ: ಆರೋಪಿ ಬಂಧನ

Update: 2020-10-21 16:15 GMT

ಬಂಟ್ವಾಳ, ಅ. 21: ಕೊಳ್ನಾಡು ಗ್ರಾಮದ ಮಾಡರಸು ಕುಡಿ ಅಡಿತ್ತಾಯ ಐವರು ಬಂಟರು ದೈವಸ್ಥಾನದ ಕಾಣಿಕೆ ಡಬ್ಬಿಯನ್ನು 2019ರ ಜನವರಿ  2 ರಂದು ರಾತ್ರಿ ಹೊತ್ತು ಕಳವು ಮಾಡಲಾಗಿತ್ತು. 2019 ರಲ್ಲಿ ಈ ಪ್ರಕರಣ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ದೈವಸ್ಥಾನದ ಆಡಳಿತಕ್ಕೆ ಸಂಬಂಧ ಪಟ್ಟ ರಮೇಶ್ ರಾವ್ ಎಂಬವರು ದೂರು ದಾಖಲಿಸಿದ್ದರು.

ಇದೀಗ ಈ ಪ್ರಕರಣದ ಆರೋಪಿಯನ್ನು ವಿಟ್ಲ ಪೊಲೀಸ್ ಠಾಣೆಯ ಎಸ್ಐ ವಿನೋದ್ ರೆಡ್ಡಿ ನೇತೃತ್ವದ ತಂಡ ಬಂಧಿಸಿದ್ದಾರೆ. ಆರೋಪಿ ಪುತ್ತೂರು ಚೇತನಾ ಆಸ್ಪತ್ರೆಯ ಬಳಿ ವಾಸವಾಗಿರುವ ಮುಹಮ್ಮದ್ ಸಾದಿಕ್ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News