ಜಯ ಸುವರ್ಣ ಆದರ್ಶರು, ಸಮಾಜಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದರು : ಮಾಜಿ ಸಚಿವ ಅಭಯಚಂದ್ರ ಜೈನ್

Update: 2020-10-22 11:41 GMT

ಮುಲ್ಕಿ : ಇತ್ತಿಚೆಗೆ ನಿಧಾನರಾದ ಬಿಲ್ಲವ ಸಮಾಜದ ನಾಯಕ ಜಯ ಸಿ ಸುವರ್ಣ ಅವರಿಗೆ ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು, ಜಯ ಸಿ ಸುವರ್ಣ ಬಿಲ್ಲವ ಸಮಾಜದ ನಾಯಕರು ಮಾತ್ರ ಅಲ್ಲದೆ ಇತರ ಸಮಾಜದ ಜನರಿಗೂ ಆದರ್ಶರಾಗಿದ್ದರು. ಸಮಾಜಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಭಾರತ್ ಬ್ಯಾಂಕ್ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯಲು ಜಯ ಸಿ ಸುವರ್ಣ ಅವರ ಕೊಡುಗೆ ಅಪಾರ. ಇದರಿಂದಾಗಿ ಶೋಷಿತರು , ಬಡವರು ಉದ್ಯೋಗ ಪಡೆದು ಬದುಕು ಸಾಗಿಸುವಂತಾಗಿದೆ. ಯಶಸ್ವಿ ಉದ್ಯಮಿಯಾಗಿ ಬೆಳೆದ ಜಯ ಸಿ ಸುವರ್ಣರ ಸಾಧನೆ ಅನನ್ಯವಾದದ್ದು ಎಂದರು.

ಈ ಸಂದರ್ಭ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆ.ಪಿ.ಸಿ.ಸಿ ಕಾರ್ಯದರ್ಶಿ ವಸಂತ್ ಬೆರ್ನಾರ್ಡ್ ಹಾಗು ಇತರರು ಉಪಸ್ಥಿತರಿದ್ದು, ಅಗಲಿದ ನಾಯಕನಿಗೆ ಗೌರವ ನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News