ಮಂಗಳೂರು : ನವರಾತ್ರಿಯ ಸಂಭ್ರಮ, ಆಯುಧ ಪೂಜೆ

Update: 2020-10-24 06:51 GMT

ಮಂಗಳೂರು : ನವರಾತ್ರಿಯ ಸಂಭ್ರಮದ ನಡುವೆ ಇಂದು ನಗರದಲ್ಲಿ ಆಯುಧ ಪೂಜೆಯನ್ನು ಆಚರಿಸಲಾಗುತ್ತಿದೆ.

ಗ್ಯಾರೇಜ್ ಸೇರಿದಂತೆ ಅಯುಧ ಅಂಗಡಿಗಳು ಹಾಗೂ  ವಾಹನಗಳನ್ನು ಅಲಂಕರಿಸಿ ಪೂಜೆ ಮಾಡಿದರು. ದೇವಸ್ಥಾನಗಳಲ್ಲಿ ವಾಹನ ಪೂಜೆ ನೆರವೇರಿಸಲಾಗುತ್ತಿದೆ. ಕೆಲವು ಗ್ಯಾರೇಜ್, ಅಂಗಡಿಗಳಲ್ಲಿ ನಿನ್ನೆಯೂ ಆಯುಧ ಪೂಜೆ ನಡೆದಿದ್ದು, ಕೆಲವರು ನಾಳೆ ಪೂಜೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಕೊರೋನ ಹಿನ್ನೆಲೆಯಲ್ಲಿ ಕಳೆದ ಹಲವು ಹಬ್ಬ ಹರಿದಿನಗಳು ಯಾವುದೇ ಸಂಭ್ರಮವಿಲ್ಲದೆ ನಡೆದಿತ್ತು. ಆದರೆ ಈ ಭಾರಿ ನವರಾತ್ರಿ ಕೂಡ ದೇವಸ್ಥಾನ ಗಳಲ್ಲಿ ಹಲವಾರು ನಿಯಮ ಪಾಲನೆಯೊಂದಿಗೆ ಆಚರಿಸಲಾಗುತ್ತಿದ್ದರೂ ಜನರಲ್ಲಿ ಹೊಸ ಚೈತನ್ಯ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News