ಕುಪ್ಪೆಪದವು: 'ಮೀಲಾದುನ್ನಬೀ ಕ್ವಿಝ್ ಕ್ಯಾಂಪೈನ್ 2020' ಕಾರ್ಯಕ್ರಮಕ್ಕೆ ಚಾಲನೆ

Update: 2020-10-24 12:13 GMT

ಕುಪ್ಪೆಪದವು: ಮದೀನತುಲ್ ಉಲೂಮ್ ಹೈಯರ್ ಸೆಕೆಂಡರಿ ಮದ್ರಸ ವಿಧ್ಯಾರ್ಥಿಗಳ ಅಧಿಕೃತ ಒಕ್ಕೂಟವಾದ ಸುನ್ನಿ ಬಾಲ ಸಂಘ(ಎಸ್ ಬಿ ಎಸ್) ಇದರ ಆಶ್ರಯದಲ್ಲಿ 'ಪ್ರವಾದಿ ಹಾದಿಯಲ್ಲಿ ಗೆಲುವಿದೆ' ಸಂದೇಶದೊಂದಿಗೆ  'ಮೀಲಾದುನ್ನಬೀ ಕ್ವಿಝ್ ಕ್ಯಾಂಪೈನ್ 2020' ಕಾರ್ಯಕ್ರಮಕ್ಕೆ ಜಮಾ‌ಅತ್ ಅಧ್ಯಕ್ಷರಾದ ಕೆ.ಎ. ಉಮರಬ್ಬ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಮಾ‌ಅತ್ ಉಪಾಧ್ಯಕ್ಷರಾದ ಹಾಜಿ ಅಬ್ದುರ್ರಝಾಖ್ ಬ್ಲೂ ಸ್ಟಾರ್ ,ಖತೀಬರಾದ ಅಬೂಝೈದ್ ಶಾಫಿ ಮದನಿ ಕರಾಯ, ಸಹಾಯಕ ಇಮಾಮ್ ಉಮರುಲ್ ಫಾರೂಖ್ ಸಖಾಫಿ ಅಲ್ ಹಿಮಮಿ ಪೆರಳ, ಎಸ್ ಬಿ ಎಸ್ ಅಧ್ಯಕ್ಷ ಮುಹಮ್ಮದ್ ಅರ್ಫಾಝ್ ,ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮುಖದ್ದಿಮ್, ಕೋಶಾಧಿಕಾರಿ ಮುಹಮ್ಮದ್ ಸುಹೈಲ್, ಎಸ್ ಬಿ ಎಸ್ ಸಮಿತಿಯ ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News