ಶ್ರೀನಿವಾಸ ವಿವಿಯಲ್ಲಿ ಐಇಇಇ ರಾಷ್ಟ್ರಮಟ್ಟದ ವೆಬಿನಾರ್

Update: 2020-10-24 14:49 GMT

ಮಂಗಳೂರು, ಅ.24: ಐಇಇಇ ಶ್ರೀನಿವಾಸ ವಿವಿಯ ವಿದ್ಯಾರ್ಥಿ ಶಾಖೆಯ ವತಿಯಿಂದ ಸಂಶೋಧನ ಸಮುದಾಯಕ್ಕೆ ಐಇಇಇಯ ಪ್ರಯೋಜನ ಗಳು ಎಂಬ ವಿಷಯದ ಮೇಲೆ ಶುಕ್ರವಾರ ರಾಷ್ಟ್ರಮಟ್ಟದ ವೆಬಿನಾರ್ ನಡೆಯಿತು.

ಸಹಾಯಕ ಪ್ರೊ. ಡಾ.ವೇದ್‌ಪ್ರಕಾಶ್ ಮಿಶ್ರಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ವಿವಿಯ ವಿದ್ಯಾರ್ಥಿ ಘಟಕದ ಸಲಹೆಗಾರ ಡಾ.ಎ. ಜಯಂತಿಲಾ ದೇವಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಐಇಇಇ ಶ್ರೀನಿವಾಸ ವಿವಿ ವಿದ್ಯಾರ್ಥಿ ಘಟಕದ ಸದಸ್ಯ ರಾಜೇಶ್ವರಿ ಎಂ. ಸ್ವಾಗತಿಸಿದರು. ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿನಯಚಂದ್ರ ವಂದಿಸಿದರು. ವಿದ್ಯಾರ್ಥಿ ಘಟಕದ ಸಮಾಲೋಚಕ ಡಾ. ಕೃಷ್ಣಪ್ರಸಾದ್ ಕೆ. ಮಾರ್ಗ ದರ್ಶನ ನೀಡಿದರು.

ವಿದ್ಯಾರ್ಥಿ ಘಟಕದ ಕಾರ್ಯದರ್ಶಿ ಗೀತಾ ಪೂರ್ಣಿಮಾ ಕೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News