ಬಂಟಕಲ್ ಕಾಲೇಜಿನಲ್ಲಿ ವರ್ಚುವಲ್ ಲ್ಯಾಬ್ ಉದ್ಘಾಟನೆ

Update: 2020-10-24 16:31 GMT

ಶಿರ್ವ, ಅ.24: ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾ ಲಯದಲ್ಲಿ ಹೊಸದಾಗಿ ಅಭಿವೃದ್ದಿ ಪಡಿಸಿದ ವರ್ಚುವಲ್ ಲ್ಯಾಬ್‌ನ್ನು ಇಂದು ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್ ಉದ್ಘಾಟಿಸಿದರು.

ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಘವೇಂದ್ರ ಎಸ್., ಲ್ಯಾಬ್ ಅಪ್ಲಿಕೇಶನ್ ಕಾರ್ಯದ ಬಗ್ಗೆ ವಿವರಿಸಿದರು. ಇದೇ ಸಂದರ್ಭ ದಲ್ಲಿ ಹೆಚ್ಚು ವೈಶಿಷ್ಠ್ಯಗಳೊಂದಿಗೆ ಅಭಿವೃದ್ದಿ ಪಡಿಸಿದ ಕಾಲೇಜಿನ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್, ಸಂಸ್ಥೆಯ ಡೀನ್‌ಗಳಾದ ಡಾ.ವಾಸುದೇವ, ಡಾ. ಸುದರ್ಶನ್ ರಾವ್ ಉಪಸ್ಥಿತರಿದ್ದರು. ಗಣಕಯಂತ್ರ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ಭಟ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವೇಣುಗೋಪಾಲ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News