ವಿಪ್ ಉಲ್ಲಂಘನೆ: ಕಾಪು ಪುರಸಭಾ ಸದಸ್ಯ ಸುರೇಶ್ ದೇವಾಡಿಗ ಕಾಂಗ್ರೆಸ್ ನಿಂದ ಅಮಾನತು

Update: 2020-10-29 07:54 GMT

ಉಡುಪಿ, ಅ. 29: ಕಾಪು ಪುರಸಭಾ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿರುವ ಪುರಸಭಾ ಸದಸ್ಯ ಸುರೇಶ್ ದೇವಾಡಿಗ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಸುರೇಶ್ ದೇವಾಡಿಗ ಪಕ್ಷದ ವಿಪ್ ಉಲ್ಲಂಘಿಸಿ ಚುನಾವಣಾ ಪ್ರಕ್ರಿಯೆ ಯಿಂದ ದೂರ ಉಳಿದಿದ್ದು ಈ ಹಿನ್ನಲೆಯಲ್ಲಿ ಸುರೇಶ್ ದೇವಾಡಿಗರ ಪಕ್ಷ ವಿರೋಧಿ ಚಟುವಟಿಕೆ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ನರಸಿಂಹ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News