ಕಲ್ಲಡ್ಕದಲ್ಲಿ ಬಜರಂಗದಳ ಕಾರ್ಯಕರ್ತರಿಂದ ಗೋ ಕಳ್ಳತನಕ್ಕೆ ಯತ್ನ; ಆರೋಪ

Update: 2020-10-29 09:01 GMT

ಬಂಟ್ವಾಳ, ಅ. 29: ಮೇಯಲು ಕಟ್ಟಿ ಹಾಕಿದ್ದ ಗೋವನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದರು ಎಂದು ಆರೋಪಿಸಿ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಕಲ್ಲಡ್ಕದಲ್ಲಿ ನಡೆದಿದೆ.

ನವೀನ ಕುದ್ರೆಬೆಟ್ಟು ಮತ್ತು ಮಾದವ ಸುದೇಕಾರ್ ಗೋವು ಕಳ್ಳತನ ಮಾಡಲು ಯತ್ನಿಸಿದವರು ಎಂದು ಆರೋಪಿಸಲಾಗಿದ್ದು, ಈ ಇಬ್ಬರು ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಲ್ಲಡ್ಕ ವಿಟ್ಲ ರಸ್ತೆಯ ಬದಿಯಲ್ಲಿ ಕಟ್ಟಿ ಹಾಕಿದ್ದ ಇಲ್ಲಿನ ಮುಹಮ್ಮದ್ ಇಮ್ರಾನ್ ಎಂಬವರಿಗೆ ಸೇರಿದ ಒಂದು ವರ್ಷ ಪ್ರಾಯದ ಕರುವನ್ನು ಕಳ್ಳತನ ಮಾಡಿ ಇಬ್ಬರು ಪಿಕ್ ಅಪ್ ನಲ್ಲಿ ಸಾಗಿಸುತ್ತಿದ್ದರು. ಪಿಕ್ ಅಪ್ ಅನ್ನು ತಡೆದ ಸ್ಥಳೀಯರು ಇಬ್ಬರನ್ನೂ ಹಿಡಿದು ಬಂಟ್ವಾಳ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಈವರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಕಲ್ಲಡ್ಕ ಪರಿಸರದಲ್ಲಿ ಕೆಲವು ಸಮಯದಿಂದ ಹಲವರಿಗೆ ಸೇರಿದ ದನ, ಕರುಗಳು, ಆಡು ಕಳ್ಳತನವಾದ ಆರೋಪ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News