ಗುರುಪುರ ಕೈಕಂಬದ ಪೊಳಲಿ ದ್ವಾರ ಸಮೀಪ 'ವಿಶ್ವಾಸ್ ಟ್ರೇಡ್ ಸೆಂಟರ್' ವಾಣಿಜ್ಯ ಸಂಕೀರ್ಣಕ್ಕೆ ಶಿಲಾನ್ಯಾಸ

Update: 2020-10-31 07:07 GMT

ಮಂಗಳೂರು, ಅ. 30: ವಿಶ್ವಾಸ್ ರಿಯಲ್ಟಿ ವತಿಯಿಂದ ಗುರುಪುರ ಕೈಕಂಬದ ಪೊಳಲಿ ದ್ವಾರದ ಸಮೀಪ ನಿರ್ಮಾಣಗೊಳ್ಳಲಿರುವ ವಾಣಿಜ್ಯ ಸಂಕೀರ್ಣ 'ವಿಶ್ವಾಸ್ ಟ್ರೇಡ್ ಸೆಂಟರ್' ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಕಾವಲ್ ಕಟ್ಟೆಯ ಹಝ್ರತ್ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಶಿಲಾನ್ಯಾಸ ಮಾಡಿ, ಪ್ರಾರ್ಥನೆಗೈದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬ್ರೋಷರ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಅಡ್ಡೂರು ಜುಮಾ ಮಸೀದಿಯ ಖತೀಬ್ ಶರೀಫ್ ದಾರಿಮಿ, ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ. ಇಬ್ರಾಹಿಂ, ರಮೇಶ್ ಶೆಟ್ಟಿ ಮಿಜಾರು, ಮೆಟ್ರೋ ಶಾಹುಲ್ ಹಮೀದ್ ಹಾಜಿ, ಹರಿಪ್ರಸಾದ್ ರೈ ಪೊಳಲಿ, ವಿವೇಕ್ ರೈ ಕೈಕಂಬ, ಸುನೀಲ್ ಫೆರ್ನಾಂಡಿಸ್, ಚಂದ್ರಹಾಸ್ ಶೆಟ್ಟಿ ನಾರಳ, ಇಂಜಿನಿಯರ್ ರವಿಪ್ರಸಾದ್ ಉಪಾಧ್ಯಾಯ ಮೂಡುಬಿದಿರೆ ಸಹಿತ  ಅನೇಕ ಗಣ್ಯರು, ಸಂಸ್ಥೆಯ ಹಿತೈಷಿಗಳು, ವಿಶ್ವಾಸ್ ಬಾವಾ ಬಿಲ್ಡರ್ಸ್ ಮತ್ತು ವಿಶ್ವಾಸ್ ಎಸ್ಟೇಟ್ ನ ಸಿಬ್ಬಂದಿ ವರ್ಗ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಕಾರ್ಯಕರ್ತರು ಉಪಸ್ಥಿತರಿದ್ದು, ಶುಭ ಹಾರೈಸಿದರು.

ಸಂಸ್ಥೆಯ ಪಾಲುದಾರರಾದ ಅಬ್ದುಲ್ ರವೂಫ್ ಪುತ್ತಿಗೆ ಮತ್ತು ಸುಲೈಮಾನ್ ಶೇಖ್ ಬೆಳುವಾಯಿ ಸ್ವಾಗತಿಸಿದರು. ಯೋಜನೆಯ ಸಂಘಟಕ ನೌಷಾದ್ ಹಾಜಿ ಸೂರಲ್ಪಾಡಿ ವಂದಿಸಿದರು.

ಮಂಗಳೂರು ಮೂಡುಬಿದಿರೆ ಹೈವೆ ಬದಿಯಲ್ಲಿ ಪೊಳಲಿ ದ್ವಾರದ ಸಮೀಪ ಆಧುನಿಕ ಎಲ್ಲ ಸೌಕರ್ಯಗಳೊಂದಿಗೆ ಆಕರ್ಷಕ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಸೂಪರ್ ಮಾರ್ಕೆಟ್, ಹೋಟೆಲ್, ಡಿಪಾರ್ಟ್ ಮೆಂಟಲ್ ಸ್ಟೋರ್ಸ್, ಎಟಿಎಂ, ಆಫೀಸ್ ಹಾಗೂ ಇನ್ನಿತರ ಅಂಗಡಿಗಳಿಗೆ ಅತ್ಯಂತ ಸೂಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 8971678889 ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News