ಉಳ್ಳಾಲ : ಇಲಲ್ ಹಬೀಬ್ ಪ್ರಯುಕ್ತ ಸಸಿ ವಿತರಣೆ

Update: 2020-10-31 07:41 GMT

ಉಳ್ಳಾಲ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ನಿರ್ದೇಶನದಂತೆ ಪ್ರವಾದಿ ಮುಹಮ್ಮದ್ (ಸ.ಅ) ಜನ್ಮದಿನದ ಪ್ರಯುಕ್ತ ಸುನ್ನೀ ಸೆಂಟರ್ ಅಳೇಕಲ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮ ನಡೆಸಲಾಯಿತು.

ಉಳ್ಳಾಲ ನಗರ ಸಭೆಯ ಚುನಾಯಿತ ಸದಸ್ಯರಾದ ಯು. ಎ ಇಸ್ಮಾಯಿಲ್, ಅಝ್ಗರ್ ಅಲಿ ಸಹಿತ ಹಲವಾರು ಊರಿನ ಗಣ್ಯರು ಪ್ರಮುಖ ವ್ಯಕ್ತಿಗಳಿಗೆ ಸಸಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಹನೀಫ್ ಸಅದಿ ಉಸ್ತಾದ್, ಹಫೀಝ್ ಉಸ್ತಾದ್, ಅನ್ಸಾರ್ ಅಳೇಕಲ, ಶಂಸುದ್ದೀನ್ ಜಝೀರ, ಫಾಝಿಲ್ ಅಳೇಕಲ, ಜಂಶೀರ್ ಅಳೇಕಲ, ನಿಹಾಲ್, ದರ್ವೇಶ್ ಪಾಂಡೇಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News